ಮಹಾರಾಷ್ಟ್ರ: ಸೊಲ್ಲಾಪುರ-ಪುಣೆ ಹೆದ್ದಾರಿಯ ಲಂಬೋಟಿ ಬಳಿ ದಿಂಡಿಯಿಂದ ಭಕ್ತರು ಪಂಢರಾಪುರಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 35-40 ಮಂದಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲರೂ ತುಳಜಾಪುರ ತಾಲೂಕಿನ ಕದಮವಾಡಿಯವರು ಎಂದು ತಿಳಿದು ಬಂದಿದೆ. ಈ ಎಲ್ಲ ಭಕ್ತರು ಏಕಾದಶಿ ನಿಮಿತ್ತ ಟ್ರ್ಯಾಕ್ಟರ್ನಲ್ಲಿ ಪಂಢರಾಪುರಕ್ಕೆ ತೆರಳಿದ್ದರು.
ಸೊಲ್ಲಾಪುರದಿಂದ ಮೊಹೋಲ್ ಮೂಲಕ ಪಂಢರಪುರಕ್ಕೆ ತೆರಳುತ್ತಿದ್ದಾಗ ಕೊಂಡಿ ಮತ್ತು ಕೆಗಾಂವ್ ನಡುವೆ ಟ್ರ್ಯಾಕ್ಟರ್ಗೆ ಹಿಂದಿನಿಂದ ಲಾರಿ (ಎಂಎಚ್ 12 ಟಿವಿ 7348) ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕ್ರಮ ಕೈಗೊಂಡಿದ್ದು ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ.