ಸಿಯೋಲ್: ಅಣ್ವಸ್ತ್ರ ದಾಳಿ ನಡೆಸುವುದಾಗಿ ಹಲವು ದೇಶಗಳಿಗೆ ಬೆದರಿಕೆಯೊಡ್ಡಿದ್ದ ಉತ್ತರ ಕೊರಿಯಾದಲ್ಲಿ ಆಹಾರ ಕೊರತೆ ತೀವ್ರಗೊಂಡಿದೆ. ಈ ನಿಟ್ಟಿನಲ್ಲಿ ಜಲನಿರೋಧಕ ತಳಿಯ ಭತ್ತ ಕೃಷಿ ಹೆಚ್ಚಿಸುವಂತೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಆದೇಶ ನೀಡಿದ್ದಾರೆ. ಅಲ್ಲದೆ ಜಲ ನಿರೋಧಕ ಭತ್ತದ ನಾಟಿಗೆ ಸಿದ್ಧರಾಗುವಂತೆ ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ರೈತರಿಗೆ ಕರೆ ನೀಡಿದೆ.
ದೇಶದ ಮುಖ್ಯ ಪತ್ರಿಕೆಯಾದ ರೊಡಾಂಗ್ ಸಿನ್ಮುನ್ನ ಮೊದಲ ಪುಟದಲ್ಲಿ ಪ್ರಕಟವಾದ “ನೀರು ನಿರೋಧಕ ಭತ್ತದ ನಾಟಿಗೆ ಸಿದ್ಧರಾಗೋಣ” ಎಂಬ ಶೀರ್ಷಿಕೆಯ ಲೇಖನದಲ್ಲಿ, ಕೃಷಿ ಕಾರ್ಮಿಕರಿಗೆ ತಮ್ಮ ಕೆಲಸವನ್ನು ಹೆಚ್ಚಿಸುವಂತೆ ಸೂಚಿಸಿದೆ. ಕೃಷಿ ಉತ್ಪಾದನೆ ಹೆಚ್ಚಿಸಲು ಅಲ್ಲಿನ ದೇಶದ ಸರ್ಕಾರಿ ಪತ್ರಿಕೆ ಆರು ಲೇಖನಗಳನ್ನು ಪ್ರಕಟಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಮತ್ತು ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ಜಾಗತಿಕ ನಿರ್ಬಂಧದಿಂದ ದೇಶದಲ್ಲಿ ಆಹಾರ ಕೊರತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಆಹಾರ ಉತ್ಪಾದನೆ ಹೆಚ್ಚಿಸಲು ಕಿಮ್ ಸರ್ಕಾರ ಸೂಚಿಸಿದೆ. ಕಳೆದ ವರ್ಷದ ಪ್ರಮುಖ ಪಕ್ಷದ ಸಭೆಯ ಸಂದರ್ಭದಲ್ಲಿ, 12 ಪ್ರಮುಖ ಆರ್ಥಿಕ ಆದ್ಯತೆಗಳಲ್ಲಿ ಧಾನ್ಯದ ಉತ್ಪಾದನೆಯ ಹೆಚ್ಚಳವನ್ನು ನಂ 1″ ನೀತಿಯಾಗಿ ರೂಪಿಸಿತ್ತು. ಅಲ್ಲದೆ ದೇಶದ್ಯಾಂತ ರೈತರು ಕೃಷಿ ಉತ್ಪಾದನೆ ಹೆಚ್ಚಿಸುವಂತೆ ಕಿಮ್ ಸೂಚಿಸಿದ್ದರು.