News Karnataka Kannada
Tuesday, April 30 2024
ಬೆಂಗಳೂರು

ಬೆಂಗಳೂರು: ಚುನಾವಣೆ ಕರ್ತವ್ಯಕ್ಕೆ 3500 ಸಾವಿರ ಬಸ್‌ಗಳ ನಿಯೋಜನೆ, ಪ್ರಯಾಣಿಕರ ಪರದಾಟ

Navarathri Temple Yatra by KSRTC - Pancha Durga Darshini with Dasara Darshini
Photo Credit : News Kannada

ಬೆಂಗಳೂರು: ವಿಧಾನ ಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮೇ 10ರ ಬೆಳಗ್ಗೆ 7ರಿಂದ ಮತದಾನ ಆರಂಭವಾಗಲಿದೆ. ಆದರೆ ಚುನಾವಣಾ ಕರ್ತವ್ಯಕ್ಕೆ ಕೆಎಸ್‌ ಆರ್‌ಟಿಸಿ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವ ಕಾರಣ ಮತದಾನಕ್ಕಾಗಿ ಊರಿಗೆ ತೆರಳುವವರಿಗೆ ಸಮಸ್ಯೆಯಾಗಿದೆ.

ಮೆಜಸ್ಟಿಕ್‌ನಿಂದ ಹಲವು ಊರುಗಳಿಗೆ ಬಸ್‌ ಗಳ ಕೊರತೆ ಕಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಚರ್ಚೆ ಮಾಡ್ತೀವಿ, ಸಮಸ್ಯೆ ಬಗೆಹರಿಸುತ್ತೀವಿ ಎಂದು ಜಾರಿ ಕೊಳ್ಳುತ್ತಿದ್ದಾರೆ. ಮತದಾನ ಹೆಚ್ಚಿಸಲು ರಜೆ ಘೋಷಿಸಿಯೂ ಪ್ರಯೋಜನವಿಲ್ಲದಂತಾಗಿದೆ. ಮತ ಹಾಕಬೇಕು ಎಂದು ತಮ್ಮ ತಮ್ಮ ಊರಿಗೆ ಹೋಗುವವರು ಅವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ 3,500 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನೀಡಲಾಗಿದ್ದು ಬಸ್​ಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆ ಮತದಾನ ಚಲಾಯಿಸಲು ತಮ್ಮ ತಮ್ಮ ಊರಿಗೆ ಹೊರಟಿರುವ ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಮೆಜೆಸ್ಟಿಕ್ ಬರುವ ಪ್ರತಿ ಸಾರಿಗೆ ಬಸ್ ಫುಲ್ ರಶ್ ಆಗಿದೆ. ದೂರದೂರಿನಿಂದ ಪ್ರಯಾಣಿಸುವವರು ಕೂಡ ಬಸ್​ನಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಯಾಣಿಸುವಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು