ವಿಶ್ವ ಸಂಸ್ಥೆ: ಹಿಂದುತ್ವ ತೀವ್ರಗಾಮಿತನ ಸೇರಿದಂತೆ ಜಗತ್ತಿನ ಎಲ್ಲ ರೀತಿಯ ಭಯೋತ್ಪಾದನಾ ಕೃತ್ಯದ ವಿರುದ್ಧ ಕಠಿಣ ನಿಲುವು ತಾಳಬೇಕು ಎಂದು ಪಾಕಿಸ್ತಾನ ಭಾರತದ ವಿರುದ್ಧ ನಾಲಿಗೆ ಹರಿಯಬಿಟ್ಟಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಅನ್ವರ್ ಉಲ್ ಹಕ್ ಕಕರ್ ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಕಂಬನಿ ಮಿಡಿದಿದ್ದು, ನಿಜ್ಜರ್ ಸಾವಿನ ವಿಚಾರದಲ್ಲಿ ಭಾರತದ ರಹಸ್ಯ ಆಟವನ್ನು ಜಗತ್ತಿನ ಮುಂದೆ ತೆರೆದಿಡಬೇಕಿದೆ ಎಂದು ಹೇಳಿದ್ದಾರೆ.
ಅಲ್ಲದೆ ಕಾಶ್ಮೀರ ವಿಚಾರ ಪರಿಹಾರ ಕಾಣದೆ ಪಾಕಿಸ್ತಾನ ಮತ್ತು ಭಾರತದಲ್ಲಿ ಶಾಂತಿ ಸ್ಥಾಪನೆಯಾಗುವುದಿಲ್ಲ ಎಂದು ಬಡಬಡಾಯಿಸಿದ್ದಾರೆ. ಕಾಶ್ಮೀರದಲ್ಲಿ ವಿಶ್ವಸಂಸ್ಥೆ ಮಿಲಿಟರಿ ವಕ್ತಾರರನ್ನು ನಿಯೋಜನೆ ಮಾಡಲು ಕೈಗೊಂಡಿದ್ದ ನಿರ್ಣಯವನ್ನು ಮತ್ತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.