News Karnataka Kannada
Saturday, May 18 2024
ವಿದೇಶ

ಕೆನಡಾ ಪ್ರಧಾನಿ ನಡೆಗೆ ಸ್ವದೇಶದಲ್ಲಿಯೇ ತೀವ್ರ ವಿರೋಧ

Canada's prime minister's move to be opposed at home
Photo Credit : News Kannada

ಟೊರಂಟೊ: ಭಾರತ ಕೆನಡಾ ಸಂಬಂಧ ತೀವ್ರವಾಗಿ ಹದಗೆಟ್ಟಿದೆ. ಜಿ. 20 ಸಮ್ಮೇಳನ ಬಳಿಕ ಕೆನಡಾ ಪ್ರಧಾನಿ ಭಾರತದ ವಿರುದ್ಧ ಮಿಥ್ಯಾರೋಪ ಮಾಡಿದ ಬಳಿಕವಂತೂ ಇದು ಇನ್ನಷ್ಟು ಬಿರುಕಿಗೆ ಕಾರಣವಾಗಿದೆ.

ಈ ನಡುವೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶದಲ್ಲಿ ಮೈಲೇಜ್‌ ಪಡೆಯಲು ಮುಂದಾಗಿದ್ದ ಕೆನಡಾ ಪ್ರಧಾನಿಗೆ ಇದೀಗ ಸ್ವದೇಶದಲ್ಲೇ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ನಿಜ್ಜರ್‌ ವಿಷಯದಲ್ಲಿ ತನಿಖೆ ಪೂರ್ಣಗೊಳ್ಳುವ ಮೊದಲೇ ಈ ಕುರಿತು ಬಹಿರಂಗ ಟೀಕೆ ಮಾಡಿದ ಜಸ್ಟಿನ್‌ ವರ್ತನೆಯನ್ನು ಕೆನಡಾದ ಮಾಧ್ಯಮಗಳು ಟೀಕಿಸಿವೆ. ಜೊತೆಗೆ ಅಲ್ಲಿನ ವಿಪಕ್ಷಗಳು ಕೂಡಾ, ಇಂಥದ್ದೊಂದು ಆರೋಪಕ್ಕೆ ಪ್ರಧಾನಿ ಸೂಕ್ತ ಸಾಕ್ಷ್ಯ ನೀಡದ ಹೊರತೂ ನಾವು ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿವೆ.

ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಶುಕ್ರವಾರ ಮತ್ತೊಮ್ಮೆ ಆರೋಪ ಮಾಡಿರುವ ಟ್ರುಡೋ, ತಮ್ಮ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯ ನೀಡಲಾಗದೆ ಟೀಕೆಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆಯೇ ಭಾರತದ ಮೇಲಿನ ಟೀಕೆ ಬೆನ್ನಲ್ಲೇ ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ತೆರಳಿದ್ದ ಟ್ರುಡೋ ಅಲ್ಲಿ ಹಲವು ದೇಶಗಳ ಮುಂದೆ ಭಾರತದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದರೂ ಯಾವುದೇ ದೇಶಗಳೂ ಅದಕ್ಕೆ ಸೊಪ್ಪು ಹಾಕಿಲ್ಲ ಎಂದು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು