ಕೋಲ್ಕತ್ತಾ: ದೇಶದಲ್ಲಿ ಚುನಾವಣೆ ನಡೆಯುತ್ತಿರುವ ಸಮಯದಲ್ಲೇ ದೂರದರ್ಶನದ ಲೋಗೋ ಬಣ್ಣ ಬದಲಾಗಿ ಕೇಸರೀಕರಣವಾಗುತ್ತಿರುವುದು ಆಘಾತಕಾರಿಯಾಗಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಬೆಳವಣಿಗೆಯನ್ನು ಅನೈತಿಕ, ಅಕ್ರಮ ಹಾಗು ಬಿಜೆಪಿಯ ಪರ ಎಂದಿರುವ ದೀದಿ, ಭಾರತದ ಚುನಾವಣಾ ಆಯೋಗ ಇದಕ್ಕೆ ಹೇಗೆ ಅನುವು ಮಾಡಿಕೊಟ್ಟಿದೆ ಎಂದು ಪ್ರಶ್ನಿಸಿದ್ದಾರೆ.
ʼಜನರು ಚುನಾವಣಾ ಮೂಡ್ನಲ್ಲಿ ಇರುವಾಗ ಇಂತಹ ಕ್ರೂರ, ಕೇಸರೀಕರಣದ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲು ಚುನಾವಣಾ ಆಯೋಗ ಹೇಗೆ ಅವಕಾಶ ಮಾಡಿಕೊಟ್ಟಿತು?ʼ ಎಂದು ಪ್ರಶ್ನಿಸಿದ ಮಮತಾ, ಇದನ್ನು ಕೂಡಲೇ ನಿಲ್ಲಿಸಿ ಲೋಗೋವನ್ನು ಮೊದಲಿನಂತೆ ನೀಲಿ ಬಣ್ಣಕ್ಕೆ ಬದಲಿಸುವಂತೆ ಆಗ್ರಹಿಸಿದ್ದಾರೆ.