ಲಖನೌ: ನೋಂದಣಿಯಾಗದ ಮದರಸಾಗಳ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಾನೂನು ಮಾನ್ಯತೆ ಇಲ್ಲದ ಮದರಸಾಗಳ ವಿರುದ್ಧ ಈಗ ಆದಿತ್ಯನಾಥ್ ಸರ್ಕಾರ ನೋಟಿಸ್ ನೀಡಿದೆ. ನೋಂದಣಿ ಇಲ್ಲದ ಮದರಸಾಗಳು ಸೂಕ್ತ ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲದಿದ್ದರೆ ಪ್ರತಿ ದಿನ 10,000 ರೂಪಾಯಿ ದಂಡ ಪಾವತಿಸಬೇಕು ಎಂದು ನೋಟಿಸ್ನಲ್ಲಿ ಸೂಚಿಲಾಗಿದೆ.
ಉತ್ತರ ಪ್ರದೇಶದ ಶಿಕ್ಷಣ ಸಚಿವಾಲಯ ಈ ನೋಟಿಸ್ ಜಾರಿಗೊಳಿಸಿದೆ. ಯುಪಿಯಲ್ಲಿ ಸರಿಸರುಮಾರು 24,000 ಮದರಸಾಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ನೋಂದಣಿ ಆಗಿರುವ ಮದರಸಾ ಸಂಖ್ಯೆ 16,000 ಮಾತ್ರ. ಇನ್ನುಳಿದ 8,000ಕ್ಕೂ ಹೆಚ್ಚು ಮದರಸಾಗಳು ಅಕ್ರಮವಾಗಿ ನಡೆಯತ್ತಿದೆ. ಹೀಗಾಗಿ ಅಕ್ರಮ ಮದರಸಾಗಳಿಗೆ ನೋಟಿಸ್ ನೀಡಲಾಗತ್ತಿದೆ.