ಉತ್ತರಪ್ರದೇಶ : ಭ್ರಷ್ಟಾಚಾರ ಅರೋಪಕ್ಕೆ ತುತ್ತಾದ ಐವರು ಅಧಿಕಾರಿಗಳನ್ನು ಅಮಾನತು ಗೊಳಿಸುವ ಮೂಲಕ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭ್ರಷ್ಟಾಚಾರಿಗಳ ಚಳಿ ಬಿಡಿಸಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಲೋಕೋಪಯೋಗಿ ಇಲಾಖೆ ಸೇರಿದಂತೆ ಐವರು ಅಧಿಕಾರಿಗಳು ಮನೆ ಸೇರಿದ್ದಾರೆ.
ಲೋಕೋಪಯೋಗಿ ಸಚಿವ ಜಿತಿನ್ ಪ್ರಸಾದ್ ಅವರ ಒಎಸ್ ಡಿ ಅನಿಲ್ ಕುಮಾರ್ ಪಾಂಡೆ ವಿರುದ್ಧ ಜು. 18ರಂದು ಕ್ರಮ ತೆಗೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ.
ಪಿಡಬ್ಲ್ಯುಡಿ ಮುಖ್ಯಸ್ಥ, ಮುಖ್ಯ ಇಂಜಿನಿಯರ್ ಮನೋಜ್ ಗುಪ್ತಾ ಸೇರಿ ಇತರ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವ ಮೂಲಕ ಭ್ರಷ್ಟಾಚಾರಿಗಳಿಗೆ ಯೋಗಿ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.