ಉತ್ತರ ಪ್ರದೇಶ: ಕುದುರೆ ಏರಿ ಖದೀಮರಿಬ್ಬರು ದೇವಸ್ಥಾನದ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದ ಸಮೀಪದಲ್ಲಿರುವ ದೇವಸ್ಥಾನ ಒಂದಕ್ಕೆ ಇಬ್ಬರು ಖದೀಮರು ಕುದುರೆ ಏರಿ ಕಳ್ಳತನಕ್ಕೆ ಬಂದಿದ್ದಾರೆ. ಹಲವು ಸಮಯಗಳ ಕಾಲ ದೇಗುಲದ ಕಾಣಿಕೆ ಹುಂಡಿಯನ್ನು ಕದಿಯಲು ಯತ್ನಿಸಿದ್ದು ಕಳ್ಳರನ್ನು ನೊಡಿದ ನಾಯಿಯೊಂದು ಏಕಾಏಕಿ ಕೂಗತೊಡಗಿದೆ.
ನಾಯಿ ಕೂಗಿದ್ದರಿಂದ ಎಚ್ಚರಗೊಂಡ ಸ್ಥಳೀಯರಿಗೆ ಕಳ್ಳತನದ ಬಗ್ಗೆ ಅನುಮಾನ ಬಂದು ಮನೆಯಿಂದ ಹೊರ ಬಂದಿದ್ದಾರೆ. ತಕ್ಷಣ ಸ್ಥಳೀಯರನ್ನು ಕಂಡ ದರೋಡೆಕೋರರು ಪುನಃ ಕುದುರೆ ಏರಿ ಅಲ್ಲಿಂದ ಕಾಲ್ಕಿತ್ತಿದ್ದಿದ್ದಾರೆ. ಘಟನೆಯ ದೃಶ್ಯಗಳು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Peak UP
Two thieves who arrived on a horse to steal at a temple in Kanpur where captured on CCTV camera. Their theft bid was foiled after two people woke up to the commotion. pic.twitter.com/PryiJrgmVI
— Piyush Rai (@Benarasiyaa) December 24, 2023