ಅಯೋಧ್ಯೆ: ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ಅವರು ಸೋಮವಾರ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಸಾಂಕೇತಿಕ ‘ಶಿರಚ್ಛೇದ’ ನಡೆಸಿದರು. ಬಳಿಕ ಅವರ ಪೋಸ್ಟರ್ಗಳಿಗೆ ಬೆಂಕಿ ಹಚ್ಚಿದರು. ಈ ವೇಳೆ ಮಾತನಾಡಿದ ಆಚಾರ್ಯ, ಸ್ಟಾಲಿನ್ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸಿದರು.
ಬೇರೆ ಯಾರಾದರೂ ಈ ಕಾರ್ಯ ಮಾಡಲು ವಿಫಲವಾದಲ್ಲಿ ನಾನೇ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು. ಪರಮಹಂಸರು ಈ ಹಿಂದೆಯೂ ವಿವಾದಿತ ಹೇಳಿಕೆಗಳನ್ನು ನೀಡಿದ್ದು, ಬಿಹಾರದ ಸಚಿವರ ನಾಲಿಗೆ ಕತ್ತರಿಸಿದಲ್ಲಿ 10 ಕೋಟಿ ರೂ. ನೀಡುವುದಾಗಿ ಹಿಂದೊಮ್ಮೆ ಹೇಳಿದ್ದರು. ಅಲ್ಲದೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಗೂ ಬೆದರಿಕೆ ಹಾಕಿದ್ದರು.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಸೊಳ್ಳೆಗಳಿದ್ದಂತೆ, ಡೆಂಗ್ಯೂ ಮತ್ತು ಮಲೇರಿಯಾವನ್ನು ನಿರ್ಮೂಲನೆ ಮಾಡಬೇಕು ಎಂದು ನೀಡಿದ ಹೇಳಿಕೆ ದೇಶದೆಲ್ಲೆಡೆ ವಿವಾದ ಹುಟ್ಟುಹಾಕಿದೆ.