ಉತ್ತರ ಪ್ರದೇಶ: ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ವಧುವೊಬ್ಬಳು ವರನನ್ನು ಮದುವೆಯಾಗಲು ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣವೇನೆಂದು ತಿಳಿದರೆ, ಪ್ರತಿಯೊಬ್ಬರಿಗೂ ಶಾಕ್ ಆಗುವುದು ಖಂಡಿತ.
ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದಿದ್ದವು. ಇನ್ನೇನು ತಾಳಿ ಕಟ್ಟುವ ಸಮಯ ಬಂದೇ ಬಿಡ್ತು. ಮೆರವಣಿಗೆ ಮುಗಿಸಿ ಬಂದ ವರನಿಗೆ ವಧುವಿನ ಕಡೆಯವರು ತಿಲಕವಿಡಲು ಮುಂದಾದರು. ಈ ವೇಳೆ ವರನನ್ನು ನೋಡಿದ ವಧು ವರನು ತೆಳ್ಳಗಿದ್ದ ಕಾರಣ ಅವನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದಕ್ಕೆ ವಧುವಿನ ಕಡೆಯವರೂ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೇ, ವರನ ಕಡೆಯವರಿಗೆ ತರಾಟೆ ತೆಗೆದುಕೊಂಡಿದ್ದು, ಮೆರವಣಿಗೆಗೆ ಮಾಡಿದ ಖರ್ಚನ್ನು ವಾಪಸ್ ಕೊಡಿಸುವಂತೆ ಜಗಳವಾಡಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ವರನನ್ನು ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.