ವಾರಣಾಸಿ: ಉತ್ತರ ಪ್ರದೇಶ ಪ್ರವಾಸದಲ್ಲಿರುವ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಅವರು ಇಂದು ವಾರಣಾಸಿಯ ನೇಕಾರರನ್ನು ಭೇಟಿ ಮಾಡಿದರು.
ಬನರಾಸ್ ಸೀರೆ ನೇಯ್ಗೆಗೆ ಹೆಸರುವಾಸಿಯಾದ ಲಲ್ಲಾಪುರ ಪ್ರದೇಶಕ್ಕೆ ಭೇಟಿ ಕೊಟ್ಟು, ನೇಕಾರರ ಜೊತೆ ಮಾತುಕತೆ ನಡೆಸಿದರು. ರೇಷ್ಮೆ ಖರೀದಿ ಸೇರಿದಂತೆ ನೇಕಾರರ ಸಮಸ್ಯೆ ಹಾಗೂ ಅಭಿಪ್ರಾಯವನ್ನು ಕೇಳಿದರು.
ಅಲ್ಲದೇ ಕರ್ನಾಟಕ ರೇಷ್ಮೆ ಮಾರುಕಟ್ಟೆಯನ್ನು ವಾರಣಾಸಿಯಲ್ಲಿ ಆರಂಭಿಸುತ್ತಿರುವ ಬಗ್ಗೆ ಮಾಹಿತಿ ನೀಡಿ, ಉತ್ತಮ ಗುಣಮಟ್ಟದ ರೇಷ್ಮೆ ಒದಗಿಸುವುದಾಗಿ ಭರವಸೆ ನೀಡಿದರು. ಕೆಎಸ್ಎಂಬಿ ವತಿಯಿಂದಲೇ ರೇಷ್ಮೆ ಖರೀದಿಸುವಂತೆ ವಾರಣಾಸಿಯ ನೇಕಾರರಿಗೆ ಸಚಿವ ಡಾ.ನಾರಾಯಣ ಗೌಡ ಮನವಿ ಮಾಡಿದರು.