News Karnataka Kannada
Saturday, April 27 2024
ಉತ್ತರ ಪ್ರದೇಶ

ತಾಲಿಬಾನ್‌ ನಡೆಯನ್ನು ಸಮರ್ಥಿಸಿಕೊಂಡ ಸಮಾಜವಾದಿ ಪಕ್ಷದ ಸಂಸದನ ಹೇಳಿಕೆಗೆ ವ್ಯಾಪಕ ಖಂಡನೆ

Taliban
Photo Credit :

 

ನವದೆಹಲಿ: ಇಡೀ ಜಗತ್ತಿನ ಎಲ್ಲೆಡೆ ತಾಲಿಬಾನ್‌ ಉಗ್ರರು ಅಪ್ಘಾನಿಸ್ಥಾನವನ್ನು ಬಗ್ಗೆ ಆತಂಕ ವ್ಯಕ್ತಪಡಿಸುತಿದ್ದರೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫಿಕರ್‌ ರೆಹಮಾನ್‌ ಬಾರ್ಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಾಲಿಬಾನ್‌ಗಳು ಅಫ್ಘಾನ್‌ನಲ್ಲಿ ಸ್ವಾತಂತ್ರ್ಯವನ್ನು ಬಯಸಿದ್ದಾರೆ ಎಂದು ಭಾರತದ ಸ್ವಾತಂತ್ರ್ಯ ಚಳುವಳಿಗೆ ಹೋಲಿಸಿ ಹೇಳಿದ್ದಾರೆ. ಸಂಭಾಲ್ ಲೋಕಸಭಾ ಸಂಸದ ಶಫಿಕರ್ ಅವರ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ರಷ್ಯಾ ಮತ್ತು ಅಮೆರಿಕ ಅಫ್ಘಾನಿಸ್ತಾನವನ್ನು ಆಳಲು ತಾಲಿಬಾನ್ ಅನುಮತಿಸುವುದಿಲ್ಲ. ಈಗ ಅವರು ತಮ್ಮ ದೇಶವನ್ನು ಆಳಲು ಬಯಸುತ್ತಾರೆ. ದೇಶವನ್ನು ಬ್ರಿಟಿಷರು ಆಳಿದಾಗ, ಇಡೀ ದೇಶವು ಅವರ ವಿರುದ್ಧ ಹೋರಾಡಿತು. ಅದೇ ರೀತಿ, ಅವರಿಗೆ ಸ್ವಾತಂತ್ರ್ಯ ಬೇಕು. ಅದು ಅವರ ಆಂತರಿಕ ವ್ಯವಹಾರವಾಗಿದೆ. ನಾವು ಅದರಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತೇವೆ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಆಫ್ಘನ್​ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆಬಾರ್ಕ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಾಚಿಕೆಯಿಲ್ಲದೆ ತಾಲಿಬಾನ್‌ಗಳನ್ನು ಶಫಿಕರ್‌ ರೆಹಮಾನ್‌ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಆದ್ರೆ ಇವರು ಮಾನವೀಯತೆಗೆ ಬೆಂಕಿ ಹಚ್ಚುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾನು ಸಂಸದರ ಹೇಳಿಕೆ ಕೇಳಲಿಲ್ಲ. ಆದರೆ, ಬಾರ್ಕ್‌ ಅಂತಹ ಟೀಕೆಗಳನ್ನು ಮಾಡಿದ್ದರೆ, ಅವರು ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವೆ ಯಾವುದೇ ದೊಡ್ಡ ವ್ಯತ್ಯಾಸವಿರಲಿಲ್ಲ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಪ್ರತಿಕ್ರಿಯಿಸಿದ್ದಾರೆ.ಹಲವಾರು ನೆಟ್ಟಿಗರೂ ಈ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು