News Karnataka Kannada
Tuesday, May 07 2024
ಉತ್ತರ ಪ್ರದೇಶ

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಜಾತಿಗಳ ಒಳಿತಿಗಾಗಿ ಕೆಲಸ ಮಾಡಿದರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

Amithshah
Photo Credit : News Kannada

ಬರೇಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಜಾತಿಗಳ ಒಳಿತಿಗಾಗಿ ಕೆಲಸ ಮಾಡಿದರು,ಎಸ್‌ಪಿ ಸರ್ಕಾರ ಇದ್ದಾಗ ಕೇವಲ ಒಂದು ಜಾತಿಯ ಅಭಿವೃದ್ಧಿಗಾಗಿ ಕೆಲಸ ಮಾಡಿತು. ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದರು.

 ಉತ್ತರ ಪ್ರದೇಶದಲ್ಲಿ ಇದಕ್ಕೂ ಮೊದಲು ರಚನೆ ಆಗಿದ್ದ ಸರ್ಕಾರಗಳು ಜಾತಿವಾದಿ ಸರ್ಕಾರ ಗಳಾಗಿದ್ದವು.  ಬಹುಜನ ಸಮಾಜ ಪಕ್ಷ ಸರ್ಕಾರ ರಚಿಸಿದ್ದಾಗ ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿತು. ಮೋದಿ ಅವರು ಎಲ್ಲರ ಜೊತೆ, ಎಲ್ಲರ ವಿಕಾಸ (ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌) ತತ್ವದಡಿ ಕೆಲಸ ಮಾಡಿದರು ಎಂದರು.

ಬರೀಲಿ ಜಿಲ್ಲೆಯ ಓಲ್ನಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು, ಉತ್ತರ ‍ಪ್ರದೇಶದಲ್ಲಿ ಗೂಂಡಾ ರಾಜ್ಯ ಕೊನೆಗಾಣಿಸುವುದಾಗಿ 2017ರಲ್ಲಿ ಬಿಜೆಪಿಯ ಅಧ್ಯಕ್ಷ ಆಗಿದ್ದ ಸಮಯದಲ್ಲಿ ಭರವಸೆ ನೀಡಿದ್ದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆ ಭರವಸೆಗಳನ್ನು ಈಡೇರಿಸಿದ್ದಾರೆ. ಮಾಫಿಯಾಗಳು ರಾಜ್ಯದಲ್ಲಿ ಕಾಣಿಸುತ್ತಿಲ್ಲ. ಆಜಂ ಖಾನ್‌, ಅತಿಕ್‌ ಅಹ್ಮದ್‌ ಮತ್ತು ಮುಕ್ತಾರ್‌ ಅನ್ಸಾರಿ ಈಗ ಜೈಲಿನಲ್ಲಿ ಇದ್ದಾರೆ ಎಂದು ಅವರು ಹೇಳಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು