ನವದೆಹಲಿ: ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಉತ್ತರಾಖಂಡದ ಮಳೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹಗಳು ಮತ್ತು ಭೂಕುಸಿತಗಳು ಕಳೆದ ಕೆಲವು ದಿನಗಳಲ್ಲಿ 54 ಜನರನ್ನು ಬಲಿ ತೆಗೆದುಕೊಂಡಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಂಟಾದ ಪರಿಸ್ಥಿತಿಯ ಅವಲೋಕನಕ್ಕಾಗಿ ಕೇಂದ್ರ ಗೃಹ ಸಚಿವರು ಗುರುವಾರ ಡೆಹ್ರಾಡೂನ್ ತಲುಪಿದರು.
ಏತನ್ಮಧ್ಯೆ, ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಅವರು ಗುರುವಾರ ಬದರಿನಾಥ ಧಾಮಕ್ಕೆ ಸಣ್ಣ ಮತ್ತು ಲಘು ವಾಹನಗಳ ಮಾರ್ಗವನ್ನು ತೆರೆಯಲಾಗಿದೆ ಎಂದು ಹೇಳಿದರು.
ನೈನಿತಾಲ್ನಿಂದ ರಾಮಗಡ ಮತ್ತು ಮುಕ್ತೇಶ್ವರಕ್ಕೆ ಹೋಗುವ ರಸ್ತೆ ಮಾರ್ಗವೂ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.”ಬದರಿನಾಥ ಧಾಮಕ್ಕೆ ಸಣ್ಣ/ಲಘು ವಾಹನಗಳ ಮಾರ್ಗವನ್ನು ತೆರೆಯುವುದರೊಂದಿಗೆ ಚಾರ್ಧಾಮ್ ಯಾತ್ರೆಯನ್ನು ಪುನರಾರಂಭಿಸಲಾಗಿದೆ. ನೈನಿತಾಲ್ನಿಂದ ರಾಮಗಡ ಮತ್ತು ಮುಕ್ತೇಶ್ವರಕ್ಕೆ ಹೋಗುವ ಮಾರ್ಗವೂ ಈಗ ಕಾರ್ಯನಿರ್ವಹಿಸುತ್ತಿದೆ” ಎಂದು ಡಿಜಿಪಿ ಹೇಳಿದರು.ಧಾರಾಕಾರ ಮಳೆಯ ನಡುವೆ, ರಾಜ್ಯದಲ್ಲಿ ರಸ್ತೆಗಳು, ಕಟ್ಟಡಗಳು ಮತ್ತು ತುಂಬಿ ಹರಿಯುತ್ತಿರುವ ನದಿಗಳು ಜನರನ್ನು ವಿವಿಧ ಸ್ಥಳಗಳಲ್ಲಿ ಸಿಲುಕಿಸಿವೆ.