News Karnataka Kannada
Monday, April 29 2024
ಉತ್ತರ ಪ್ರದೇಶ

ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಗೋರಖನಾಥ ಮಂದಿರಕ್ಕೆ ನುಗ್ಗಲೆತ್ನಿಸಿದ ಮುಸ್ಲಿಂ ಯುವಕ

Uttar Pradesh
Photo Credit :

ಮುಸ್ಲಿಂ ಯುವಕನೊಬ್ಬ ಏಪ್ರಿಲ್ 3ರಂದು ಸಂಜೆ 7.45ರ ಸುಮಾರಿಗೆ ಉತ್ತರ ಪ್ರದೇಶದ ಗೋರಖನಾಥ ಮಂದಿರಕ್ಕೆ ನುಗ್ಗಲೆತ್ನಿಸಿದ ಘಟನೆ ನಡೆದಿದೆ.

ಅಹ್ಮದ್ ಮುರ್ತಜಾ ಅಬ್ಬಾಸಿ ಎಂಬ ಯುವಕ ಗೋರಖನಾಥ ಮಂದಿರದ ಪ್ರವೇಶದ ಬಳಿ ಮೊದಲು ತಪಾಸಣೆಗೆ ಒಳಗಾಗುವುದನ್ನು ವಿರೋಧಿಸಿದ್ದಾನೆ. ನಂತರ ಹರಿತವಾದ ಆಯುಧ ತೆಗೆದು ಪೊಲೀಸರ ವಿರುದ್ಧ ಪ್ರಯೋಗಿಸಿ ಇಬ್ಬರನ್ನು ಗಾಯಗೊಳಿಸಿದ್ದಾನೆ. ಈ ವೇಳೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕೊನೆಗೆ ಇಬ್ಬರು ಪೊಲೀಸರು ಈತನನ್ನು ಕಟ್ಟಿಹಾಕುವುದರಲ್ಲಿ ಯಶಸ್ವಿಯಾದರು. ವರದಿಗಳ ಪ್ರಕಾರ ಈತ ಐಐಟಿ ಬಾಂಬೆಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಪದವೀಧರ. ಸಿಕ್ಕಿಬಿದ್ದ ನಂತರ ವಿಚಾರಣೆಯಲ್ಲಿ ತಾನು ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ಈ ಕೃತ್ಯ ಮಾಡುವಂತಾಯಿತು ಎಂದು ಹೇಳಿದ್ದಾನೆ.

ಈತನ ಈ ಹೇಳಿಕೆಯನ್ನು ಏಕಾಏಕಿ ನಂಬಬಾರದು ಎಂದು ಸಾಮಾಜಿಕ ಮಾಧ್ಯಮದಲ್ಲಿ ವಾದವೂ ಎದ್ದಿದೆ. ಇದು ಕಾನೂನು-ಸುವ್ಯವಸ್ಥೆ ಭಂಗದ ದೊಡ್ಡ ಸಂಚೇ ಆಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದಕ್ಕೆ ಇಂಬು ಕೊಡುವಂತೆ, ಅಹ್ಮದ್ ಜತೆ ಇನ್ನೂ ಒಬ್ಬ ಮುಸ್ಲಿಂ ಯುವಕನಿದ್ದ ಹಾಗೂ ಈತನನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಂತೆ ಆತ ಓಡಿಹೋಗಿದ್ದಾನೆ ಎಂಬ ಬಗ್ಗೆ ಪುರಾವೆಗಳು ಲಭ್ಯವಾಗಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಮಹಾಂತರಾಗಿರುವ ದೇವಾಲಯವು ಗೋರಖನಾಥ ಮಂದಿರ ಎಂಬುದಿಲ್ಲಿ ಗಮನಾರ್ಹ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು