ಹೈದರಾಬಾದ್: ಪೋಲಿಸರ ಆದೇಶದಂತೆ ತೆರವುಗೊಳ್ಳಬೇಕಿದ್ದ ಗೂಡಂಗಡಿಯೊಂದನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಲ್ಲೇ ಉಳಿಯುವಂತೆ ಮಾಡಿದ್ದಾರೆ.
ಕುಮಾರಿ ಆಂಟಿ ಎಂದೇ ಪ್ರಸಿದ್ಧರಾಗಿರುವ ದಸರಿ ಸಾಯಿ ಕುಮಾರಿಯವರ ಕುರುಕುಲು ತಿಂಡಿ ಮಾರುವ ಗೂಡಂಗಡಿ ಹೈಟೆಕ್ ಸಿಟಿಯಲ್ಲಿದ್ದು, ಗ್ರಾಹಕರಿಂದ ಉಂಟಾಗುತ್ತಿದ್ದ ಜನದಟ್ಟಣೆ ಹಾಗು ಟ್ರಾಫಿಕ್ ಗಮನಿಸಿ ಅದನ್ನು ಅಲ್ಲಿಂದ ತೆರವುಗೊಳಿಸಿ ಬೇರೆಡೆ ತೆರೆಯುವಂತೆ ಪೋಲಿಸ್ ಆದೇಶಿಸಿದ್ದರು. ಜನರಿಂದ ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಘಟನೆಯ ಬಗ್ಗೆ ಸಿಎಂ ಪ್ರತಿಕ್ರಿಯಿಸಿ ಆದೇಶವನ್ನು ರದ್ದುಗೊಳಿಸುವಂತೆ ಸೂಚಿಸಿದ್ದಾರೆ.
ಪ್ರಸಿದ್ಧ ವ್ಯಕ್ತಿಗಳಿಂದ ಹಿಡಿದು ಜನಸಾಮಾನ್ಯರು ಕುಮಾರಿ ಆಂಟಿಯ ಅಂಗಿಡಿಯ ಸುತ್ತ ಯಾವಾಗಲೂ ಇರುತ್ತಿದ್ದು, ಇದರಿಂದ ಜನದಟ್ಟಣೆ ಉಂಟಾಗುತ್ತಿತ್ತು. ಕೆಲ ಗ್ರಾಹಕರು ತಿಂಡಿ-ತಿನಿಸುಗಳನ್ನು ಸವಿಯಲು ಬಂದರೆ, ಹಲವು ಫುಡ್ ಬ್ಲಾಗರ್ ಗಳು ವೀಡಿಯೋ ಚಿತ್ರೀಕರಣದಲ್ಲಿ ತೊಡಗಿರುತ್ತಿದ್ದರು.