ಚೆನ್ನೈ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ ತಮಿಳುನಾಡು ಬಿಜೆಪಿಯ ಹೃದಯದಲ್ಲಿದೆ ಎಂದು ‘ಎನ್ ಮಣ್ಣ್ ಎನ್ ಮಕ್ಕಳ್’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಮೋದಿ, ದೇಶದ ಅಖಂಡತೆಯನ್ನು ಒಡೆಯುವ ಕನಸು ಕಾಣುತ್ತಿರುವವರು ತಮಿಳುನಾಡು ಭಾರತದ ಭವಿಷ್ಯವನ್ನು ರೂಪಿಸುವುದನ್ನು ನೋಡಬೇಕಾಗಿದೆ ಎಂದರು.
ತಮಿಳುನಾಡಿನ ಕಲ್ಯಾಣಕ್ಕಾಗಿ ನೀಡಲಾದ ನಿಧಿಯನ್ನು ಉಲ್ಲೇಖಿಸಿದ ಅವರು, ʼಈ ಹಿಂದೆ ಯಾವುದೇ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು 10 ವರ್ಷಗಳಲ್ಲಿ ಬಿಜೆಪಿ ನೀಡಿದೆʼ ಎಂದರು.
ತಮಿಳುನಾಡು ಅಭಿವೃದ್ಧಿಯ ರಾಜಕೀಯದ ಹೊಸ ಕೇಂದ್ರವಾಗಲಿದೆ ಹಾಗು ಇತಿಹಾಸವನ್ನು ಸೃಷ್ಟಿಸಲಿದೆ. ಇದಕ್ಕೆ ಸಾಕ್ಷಿ ಇಂದು ಪೂರ್ಣಗೊಂಡಿರುವ ಪಾದಯಾತ್ರೆ ಎಂದು ಪ್ರಧಾನಿ ಹೇಳಿದರು.