News Karnataka Kannada
Sunday, May 05 2024
ಮೈಸೂರು

ಮೈಸೂರು ಮೃಗಾಲಯದಿಂದ ಬನ್ನೇರುಘಟ್ಟಕ್ಕೆ ಜಿರಾಫೆ

ಒಂದೂವರೆ ವರ್ಷದ ಶಿವಾನಿ ಹೆಸರಿನ ಹೆಣ್ಣು ಜಿರಾಫೆಯನ್ನು ನಗರದಲ್ಲಿನ ಚಾಮರಾಜೇಂದ್ರ ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಕಳುಹಿಸಿಕೊಡಲಾಗಿದೆ.
Photo Credit : By Author

ಮೈಸೂರು: ಒಂದೂವರೆ ವರ್ಷದ ಶಿವಾನಿ ಹೆಸರಿನ ಹೆಣ್ಣು ಜಿರಾಫೆಯನ್ನು ನಗರದಲ್ಲಿನ ಚಾಮರಾಜೇಂದ್ರ ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಕಳುಹಿಸಿಕೊಡಲಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೆಲ ವರ್ಷಗಳಿಂದ ಜಿರಾಫೆ ನೀಡುವ ಬಗ್ಗೆ ಬೇಡಿಕೆ ಇದ್ದ ಹಿನ್ನೆಲೆ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಅನ್ವಯ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 8 ಜಿರಾಫೆಗಳ ಪೈಕಿ ಒಂದೂವರೆ ವರ್ಷದ (1.6ವರ್ಷ) ಶಿವಾನಿ ಹೆಸರಿನ ಹೆಣ್ಣು ಜಿರಾಫೆಯನ್ನು ವಿಶೇಷ ವಾಹನದ ಮೂಲಕ ಕಳುಹಿಸಿಕೊಡಲಾಯಿತು.

13.5 ಅಡಿ ಎತ್ತರ ಇರುವ ಶಿವಾನಿ ಜಿರಾಫೆ 2022ರಲ್ಲಿ ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿರುವ ಭರತ ಮತ್ತು ಬಬ್ಲಿ ಜಿರಾಫೆಗಳಿಗೆ ಜನಿಸಿದೆ. ಬನ್ನೇರುಘಟ್ಟ ಮೃಗಾಲಯ ತಲುಪಿದ ಶಿವಾನಿಯನ್ನು ಅಲ್ಲಿರುವ ಉಳಿದ ಜಿರಾಫೆಗಳೊಂದಿಗೆ ಬಿಡಲಾಯಿತು. ಈ ಮೂಲಕ ವರ್ಷದ ಆರಂಭದಲ್ಲಿಯೇ 2 ಜಿರಾಫೆಗಳನ್ನು ಮೈಸೂರು ಮೃಗಾಲಯದಿಂದ ಬೇರೆಡೆಗೆ ಕಳುಹಿಸಿಕೊಟ್ಟಂತಾಗಿದೆ.

ಇದೇ ವರ್ಷ ಜನವರಿಯಲ್ಲಿ ಹಂಪಿ ಮೃಗಾಲಯಕ್ಕೆ ಶಂಕರ ಹೆಸರಿನ ಎರಡೂವರೆ ವರ್ಷದ ಗಂಡು ಜಿರಾಫೆಯನ್ನು ಕಳುಹಿಸಿಕೊಡಲಾಗಿತ್ತು. ಈಗ ಬನ್ನೇರುಘಟ್ಟಕ್ಕೆ ಒಂದೂವರೆ ವರ್ಷದ ಹೆಣ್ಣು ಜಿರಾಫೆಯನ್ನು ರವಾನೆ ಮಾಡುವ ಮೂಲಕ ಎರಡು ತಿಂಗಳಲ್ಲಿ ಎರಡು ಜಿರಾಫೆಯನ್ನು ಮೈಸೂರು ಚಾಮರಾಜೇಂದ್ರ ಮೃಗಾಲಯ ಪ್ರಾಣಿ ವಿನಿಮಯ ಯೋಜನೆಯಡಿ ಕಳುಹಿಸಿಕೊಟ್ಟಂತಾಗಿದೆ.

ಮೈಸೂರು ಮೃಗಾಲಯದಲ್ಲಿ ಯುವರಾಜ, ಖುಷಿ, ಭರತ ಸೇರಿದಂತೆ 7 ಜಿರಾಫೆಗಳಿದ್ದು, ಪ್ರಾಣಿ ವಿನಿಮಯ ಯೋಜನೆಯಡಿ ಇನ್ನೂ ಕೆಲವನ್ನು ಸ್ಥಳಾಂತರ ಮಾಡುವ ಪ್ರಸ್ತಾವ ಮೃಗಾಲಯ ಪ್ರಾಧಿಕಾರದ ಮುಂದಿದ್ದು, ಇನ್ನೂ ನಿರ್ಧಾರ ಪ್ರಕಟವಾಗಿಲ್ಲ. ಜತೆಗೆ ಈ ಯೋಜನೆಯಡಿ ಮೈಸೂರು ಮೃಗಾಲಯಕ್ಕೆ ವಿದೇಶದಿಂದ ಆಫ್ರಿಕಾದ ಆನೆ, ಜಾಗ್ವಾರ್, ಚೀತಾ, ಗೊರಿಲ್ಲಾ ಮತ್ತು ಚಿಂಪಾಂಜಿ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಚಾಮರಾಜೇಂದ್ರ ಮೃಗಾಲಯದಿಂದ ದೇಶದ ಬೇರೆ ಬೇರೆ ಮೃಗಾಲಯ ಮತ್ತು ರಾಜ್ಯದ ಇತರೆ ಮೃಗಾಲಯಗಳಿಗೆ ಈವರೆಗೆ 7 ಜಿರಾಫೆಗಳನ್ನು ಯಶಸ್ವಿಯಾಗಿ ರವಾನೆ ಮಾಡಲಾಗಿದೆ. 2018ರಲ್ಲಿ ಗೌರಿ ಹೆಸರಿನ ಹೆಣ್ಣು ಜಿರಾಫೆಯನ್ನು ಬನ್ನೇರುಘಟ್ಟಕ್ಕೆ, 2019ರಲ್ಲಿ ಜಯಚಾಮರಾಜ ಎಂಬ ಗಂಡು ಜಿರಾಫೆಯನ್ನು ಅಸ್ಸಾಂನ ಗುವಾಹಟಿಗೆ, 2020ರಲ್ಲಿ ಯದುವೀರ್ ಹೆಸರಿನ ಗಂಡು ಜಿರಾಫೆಯನ್ನು ಬನ್ನೇರುಘಟ್ಟ, 2021ರಲ್ಲಿ ಆದ್ಯವೀರ್ ಮತ್ತು ಬಾಲಾಜಿ ಹೆಸರಿನ ಎರಡು ಗಂಡು ಜಿರಾಫೆಗಳನ್ನು ಸಿಂಗಾಪುರಕ್ಕೆ ಹಾಗೂ ಶಂಕರ ಹೆಸರಿನ ಗಂಡು ಜಿರಾಫೆಯನ್ನು ಕಳೆದ ತಿಂಗಳಷ್ಟೇ ವಿಜಯಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ರವಾನಿಸಲಾಗಿತ್ತು. ಈಗ ಮತ್ತೆ ಬನ್ನೇರುಘಟ್ಟಕ್ಕೆ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕಳುಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು