News Karnataka Kannada
Thursday, May 09 2024
ಪಂಜಾಬ್

ಗಡಿ ಬಳಿ ಗುಂಡಿಕ್ಕಿ ಪಾಕಿಸ್ತಾನದ ಒಳನುಸುಳುಕೋರನ ಹತ್ಯೆ: ಬಿಎಸ್‌ಎಫ್ ಮಾಹಿತಿ

PunjabBSF
Photo Credit : News Kannada

ಪಂಜಾಬ್: ಪಂಜಾಬ್ ನ ತರ್ನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಇಂದು ಪಾಕಿಸ್ತಾನದ ನಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತರ್ನ್ ತರನ್ ಜಿಲ್ಲೆಯ ತೆಕಲನ್ ಗ್ರಾಮದ ಐಬಿ ಬಳಿ ಅನುಮಾನಾಸ್ಪದ ವ್ಯಕ್ತಿಯ ಚಲನವಲನವನ್ನು ಗಮನಿಸಿದ ಬಿಎಸ್‌ಎಫ್ ಪಡೆಗಳು,ಆತನಿಗೆ ಗುಂಡಿಕ್ಕಿ ಸ್ಥಳದಲ್ಲಿಯೇ ಹತ್ಯೆ ಮಾಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈ ಹಿಂದೆ ಜುಲೈನಲ್ಲಿ ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್ ಪಡೆಗಳು ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ್ದರಿಂದ ಪಾಕಿಸ್ತಾನದ ಒಳನುಸುಳುಕೋರನೊಬ್ಬ ಸಾವನ್ನಪ್ಪಿದ್ದ. ಅರ್ನಿಯಾ ಸೆಕ್ಟರ್ನ ಜಬೋವಾಲ್ ಗಡಿ ಹೊರಠಾಣೆ ಬಳಿ ಗಡಿ ಬಳಿ ಪದೇ ಪದೇ ಮಾಡಲಾದ ಮನವಿಯನ್ನು ನಿರ್ಲಕ್ಷಿಸಿ ಗಡಿ ತಂತಿ ಬೇಲಿ ದಾಟಿ ಪಲಾಯನ ಮಾಡಲು ಪ್ರಯತ್ನಿಸಿದ ನಂತರ ಆತನನ್ನು ಭದ್ರತಾ ಪಡೆಗಳು ಹತ್ಯೆ’ ಮಾಡಿರುವುದಾಗಿ ಬಿಎಸ್ ಎಫ್ ಮಾಹಿತಿ ನೀಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು