ಚಂಡೀಘಡ ; ಪಂಜಾಬ್ ರಾಜ್ಯದ ಮುಖ್ಯ ಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಚುನಾವಣಾ ತಜ್ಞ ಹಾಗೂ ಮುಖ್ಯ ಮಂತ್ರಿಗಳ ಸಲಹೆಗಾರ ಪ್ರಶಾಂತ್ ಕಿಶೋರ್ ಅವರು ಗುರುವಾರ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಅವರು “ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿರುವ ಕಾರಣ” ಸಲಹೆಗಾರನ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಅಮರೀಂದರ್ ಗೆಲುವಿನ ಹಿಂದೆ ಇದ್ದಿದ್ದು ಇದೇ ಕಿಶೋರ್ ಅವರ ಯಶಸ್ವಿ ಮಾರ್ಗದರ್ಶನ, ಏಕೆಂದರೆ ಆಮ್ ಆದ್ಮಿ ಪಕ್ಷದ (ಎಎಪಿ) ಉದಯದೊಂದಿಗೆ ಕಠಿಣ ರಾಜಕೀಯ ಕದನ ಪಂಜಾಬ್ನಲ್ಲಿ ಉಂಟಾಗಿತ್ತು, ಈ ವೇಳೆ ಕ್ಯಾಪ್ಟನ್ ಕೈ ಹಿಡಿದ ಕಿಶೋರ್ಅವರನ್ನು “ಪಂಜಾಬಿನ ಕ್ಯಾಪ್ಟನ್” ಎಂದು ಕರೆದರು. ಇದೇ ಅವರ ಗೆಲುವಿಗೆ ಕಾರಣವಾಯಿತು ಎಂದು ಹೇಳಲಾಗಿದೆ. ಕೆಲವು ತಿಂಗಳ ಹಿಂದೆ, ಕಿಶೋರ್ ಅವರು 2022 ರಾಜ್ಯ ಚುನಾವಣೆ ಹತ್ತಿರವಿರುವ ಕಾರಣ ಮತ್ತೊಮ್ಮೆ ಸಲಹೆಗಾರನ ಪಾತ್ರವನ್ನು ವಹಿಸಿಕೊಳ್ಳುವಂತೆ ಕೇಳಲಾಗಿತ್ತು.
ಆದರೆ ಕಿಶೋರ್ ರಾಜೀನಾಮೆ ಕೊಟ್ಟ ಕಅರಣದಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಸಿಎಂ ಈಗ ಹೆಚ್ಚು ಏಕಾಂಗಿಯಾಗುತ್ತಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷಗಿರಿಯನ್ನು ನವಜೋತ್ ಸಿಂಗ್ ಸಿಧುಗೆ ವಹಿಸಿದ ಕೆಲ ದಿನಗಳ ನಂತರ ಕಿಶೋರ್ ರಾಜೀನಾಮೆ ನೀಡಿದ್ದಾರೆ. ಸಿಧು ಅವರ ಔಪಚಾರಿಕ ನೇಮಕಾತಿಗೆ ಮುಂಚೆಯೇ, ಕಿಶೋರ್ ಸಿಧು ಜೊತೆ ನೇರ ಸಂಪರ್ಕದಲ್ಲಿದ್ದರು ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ.
“ಸಿಧು ನೇಮಕಾತಿಯ ವಿಷಯದಲ್ಲೇ ಕ್ಯಾಪ್ಟನ್ ತಗಾದೆ ತೆಗೆದಿದ್ದರು, ಈಗ ಕಿಶೋರ್ ರಾಜಿನಾಮೆಯಿಂದ ರಾಜ್ಯ ರಾಜಕಾರಣದಲ್ಲಿ ಕ್ಯಾಪ್ಟನ್ ಸಂಪೂರ್ಣವಾಗಿ ಏಕಾಂಗಿಯಾಗಬಹುದು ಎಂದು ಸೂಚಿಸುತ್ತದೆ “ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಪಂಜಾಬ್ ಮುಖ್ಯ ಮಂತ್ರಿಗಳ ಸಲಹೆಗಾರನ ಹುದ್ದೆಗೆ ಪ್ರಶಾಂತ್ ಕಿಶೋರ್ ರಾಜಿನಾಮೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.