ಚಂಢೀಘಡ ; ಪಂಜಾಬ್ ಅಭಿವೃದ್ದಿಗಾಗಿ ನಾನು ಸಲ್ಲಿಸಿದ ಸೇವೆ ಮತ್ತು ಕೊಡುಗೆಯನ್ನು ಆರಂಭದಿಂದಲೂ ಆಮ್ ಆದ್ಮಿ ಪಾರ್ಟಿ ಗುರುತಿಸಿದೆ. 2017ಕ್ಕಿಂತ ಮುಂಚೆಯಿಂದಲೂ ರೈತರ ಸಮಸ್ಯೆ ಮತ್ತು ಡ್ರಗ್ಸ್ ಮಾಫಿಯಾ ವಿರುದ್ಧ ಮಾಡಿದ ನನ್ನ ಹೋರಾಟವನ್ನು ಎಲ್ಲರಿಗೂ ಮಾದರಿ ಎಂದು ಆಪ್ ಹೇಳಿದೆ. ಪಂಜಾಬ್ ಮಾಡೆಲ್ ನಿರ್ಮಿಸಿದ್ದು, ಭ್ರಷ್ಟಚಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದು ನನ್ನ ಬದ್ಧತೆಯನ್ನು ತೋರಿಸುತ್ತದೆ. ಇದುವೇ ರಾಜ್ಯದ ಜನತೆಗಾಗಿ ಶ್ರಮಿಸಿದ ನಾಯಕ ಯಾರು ಎಂದು ಸ್ಪಷ್ಟ ಸಂದೇಶ ಸಾರಲಿದೆ”; ಹೀಗೆಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಮಾಡಿದ ಟ್ವೀಟ್ ಈಗ ಭಾರೀ ಚರ್ಚೆಗೀಡಾಗಿದೆ.
ಆಮ್ ಆದ್ಮಿ ಪಾರ್ಟಿಯನ್ನು ತನ್ನ ಟ್ವೀಟ್ನಲ್ಲಿ ಉಲ್ಲೇಖಿಸಿದ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಹೈಕಮಾಂಡ್ಗೆ ಸ್ಪಷ್ಟ ಸಂದೇಶವೊಂದು ರವಾನಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ನಾನು ಆಪ್ ಪಕ್ಷ ಸೇರಬಹುದು ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಈ ಬೆಳವಣಿಗೆಗೆ ಕಾರಣವೇ ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್ ಸಿಎಂ ಅಮರಿಂಧರ್ ಸಿಂಗ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಎಂಬುದು ಮಾತ್ರ ಜಗತ್ಜಾಹೀರ.
ಕಳೆದೊಂದು ವರ್ಷದಿಂದ ಪಂಜಾಬ್ ಸಿಎಂ ಅಮರಿಂಧರ್ ಸಿಂಗ್ ಮತ್ತು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಗಂತೂ ಇದು ತಲೆನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ.ನವಜೋತ್ ಸಿಂಗ್ ಸಿಧುರನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಈ ಮುಸುಕಿನ ಗುದ್ದಾಟ ಮಾತ್ರ ನಿಲ್ಲುತ್ತಿಲ್ಲ. ಬದಲಿಗೆ ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನು ಬಹಿರಂಗವಾಗಿ ಟೀಕಿಸುವ ಸಿಧು ಚಾಳಿಯಂತೂ ಮುಂದುವರಿಯುತ್ತಲೇ ಇದೆ. ಇದಕ್ಕೆ ಕಾರಣವೂ ಇಂದು ಸಿಧು ಇಂದು ಮಾಡಿರುವ ಟ್ವೀಟ್ ಸಾಕ್ಷಿ.
ಈ ಹಿಂದೆಯೂ ಕಾಂಗ್ರೆಸ್ ರಾಹುಲ್ ಗಾಂಧಿಯವರು ಪ್ರಿಯಾಂಕಾ ಗಾಂಧಿ ಮನವಿ ಮೇರೆಗೆ ಸಿಧುರನ್ನು ಭೇಟಿ ಮಾಡಿದ್ದರು. ಯಾವುದೇ ಕಾರಣಕ್ಕೂ ನಿಮ್ಮ ಬಹಿರಂಗ ಜಗಳವನ್ನು ಮುಂದುವರಿಸಬೇಡಿ. ಬದಲಿಗೆ ಇಬ್ಬರು ಒಟ್ಟಾಗಿ ಮುಂದಿನ ಚುನಾವಣೆ ಗೆಲ್ಲಲು ಗಮನಹರಿಸಿ ಎಂದು ಸಿಧುಗೆ ರಾಹುಲ್ ಕಿವಿಮಾತು ಹೇಳಿದ್ದರು. ಹೀಗಾದರೂ ಅಮರೀಂದರ್ ಸಿಂಗ್ ಮತ್ತು ಸಿಧು ನಡುವಿನ ಜಗಳ ಮಾತ್ರ ನಿಂತೇ ಇಲ್ಲ.
ಹೀಗಿರುವಾಗಲೇ ನವಜೋತ್ ಸಿಂಗ್ ಸಿಧು ಮಾಡಿರುವ ಟ್ವೀಟ್ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಸಿಧು ಆಮ್ ಆದ್ಮಿ ಪಾರ್ಟಿ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪಂಜಾಬ್ ಕಾಂಗ್ರೆಸ್ ಭಿನ್ನಾಭಿಪ್ರಾಯ ; ಆಮ್ ಆದ್ಮಿ ಪಾರ್ಟಿಯತ್ತ ಮುಖ ಮಾಡಿದ ನವಜೋತ್ ಸಿಂಗ್ ಸಿಧು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.