ಪುರಿ: ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಕೈಯ್ಯಲ್ಲಿ ಚಂದ್ರಯಾನ-3 ಚಿತ್ರ ಅರಳಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಚಂದ್ರಯಾನ -3 ಅನ್ನು ಉಡಾವಣೆಗೊಳಿಸಲಿದೆ.
ಪಟ್ನಾಯಕ್ ಅವರು ಗುರುವಾರ ಒಡಿಶಾದ ಪುರಿ ಬೀಚ್ನಲ್ಲಿ “ವಿಜಯೀ ಭಾವ” (ವಿಜಯಶಾಲಿಯಾಗು) ಎಂಬ ಸಂದೇಶದೊಂದಿಗೆ 500 ಸ್ಟೀಲ್ ಬಟ್ಟಲುಗಳು ಮತ್ತು ಭಕ್ಷ್ಯಗಳನ್ನು ಸ್ಥಾಪಿಸಿದ ಚಂದ್ರಯಾನ-3 ರ 22 ಅಡಿ ಉದ್ದದ ಮರಳು ಕಲೆಯನ್ನು ರಚಿಸಿದರ. ಈ ಮೂಲಕ ವಿಶೇಷವಾಗಿ ಚಂದ್ರಯಾನದ ಯಶಸ್ವಿಗೆ ಶುಭಕೋರಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಇಂದು (ಶುಕ್ರವಾರ) ಮಧ್ಯಾಹ್ನ 2:35ಕ್ಕೆ ಗಗನನೌಕೆ ನಭಕ್ಕೆ ಚಿಮ್ಮಲಿದೆ. ಚಂದ್ರಯಾನ-2 ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3 ಯಶಸ್ಸಿಗೆ ಇಸ್ರೋ ಅಡಿಯಿಟ್ಟಿದೆ. ಜು.14 ರ ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಅನ್ನು ಎಲ್ವಿಎಂ3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ.