ನವದೆಹಲಿ, ಸೆಪ್ಟೆಂಬರ್ 01: ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಷ್ಟ್ರ ರಾಜಧಾನಿಯಲ್ಲಿ ನಡೆದ ‘ಮೇಕ್ ಇನ್ ಒಡಿಸ್ಸಾ’ ಸಮಾವೇಶಕ್ಕಾಗಿ ಹೂಡಿಕೆದಾರರ ಸಮಾವೇಶ ಮತ್ತು ಕರ್ಟೈನ್ ರೈಸರ್ ಅನ್ನು ಉದ್ದೇಶಿಸಿ ಮಾತನಾಡಿದ್ದಾರೆ ಮತ್ತು ಒಡಿಸ್ಸಾದಲ್ಲಿ ಹೂಡಿಕೆ ಮಾಡುವಂತೆ ಹೂಡಿಕೆದಾರರಿಗೆ ಮನವಿ ಮಾಡಿದ್ದಾರೆ.
ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ಸಹಯೋಗದೊಂದಿಗೆ ಒಡಿಸ್ಸಾ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಹೂಡಿಕೆದಾರರನ್ನುದ್ದೇಶಿಸಿ ಬುಧವಾರ ಮಾತನಾಡಿದ ಪಟ್ನಾಯಕ್, ಒಡಿಸ್ಸಾವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಕಳೆದ ಒಂದೂವರೆ ದಶಕದಲ್ಲಿ ನಿರಂತರವಾಗಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ನಮ್ಮ ನೈಸರ್ಗಿಕ ಸಂಪನ್ಮೂಲದ ಅನುಕೂಲ ಮತ್ತು ಆಯಕಟ್ಟಿನ ಸ್ಥಳದಿಂದಾಗಿ ನಾವು ಪೂರ್ವ ಭಾರತದ ಪ್ರಮುಖ ಕೈಗಾರಿಕಾ ತಾಣವಾಗಿ ವೇಗವಾಗಿ ಹೊರಹೊಮ್ಮುತ್ತಿದ್ದೇವೆ. ‘ಮೇಕ್ ಇನ್ ಒಡಿಸ್ಸಾ’ ಸಮಾವೇಶ 2022 ಅನ್ನು ಯಶಸ್ವಿಗೊಳಿಸಲು ನಾನು ಎಲ್ಲರ ಬೆಂಬಲವನ್ನು ಕೋರುತ್ತೇನೆ.
ಮೇಕ್ ಇನ್ ಒಡಿಸ್ಸಾ ಸಮಾವೇಶದ ಮೂರನೇ ಆವೃತ್ತಿಯು ನವೆಂಬರ್ 30 ರಿಂದ ಡಿಸೆಂಬರ್ 4 ರವರೆಗೆ ನಡೆಯಲಿದ್ದು, ಲೋಹಗಳು, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್, ಜವಳಿ ಮತ್ತು ಉಡುಪುಗಳು, ತಾಂತ್ರಿಕ ಜವಳಿ, ಆಹಾರ ಸಂಸ್ಕರಣೆ ಸೇರಿದಂತೆ ಇತರ ಕ್ಷೇತ್ರಗಳ ಮೇಲೆ ಗಮನ ಹರಿಸಲಾಗಿದೆ.
“ಒಡಿಸ್ಸಾ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಹೆಸರುವಾಸಿಯಾಗಿದೆ. ಇಂದು, ಒಡಿಶಾವು ಭಾರತದ ಉಕ್ಕು, ಸ್ಟೈನ್ ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂನ ಅತಿದೊಡ್ಡ ಉತ್ಪಾದಕವಾಗಿದೆ. ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್, ಜವಳಿ ಮತ್ತು ಉಡುಪುಗಳು, ಐಟಿ ಮತ್ತು ಐಟಿಇಎಸ್, ಆಹಾರ ಸಂಸ್ಕರಣೆ ಮತ್ತು ಇತರ ಕ್ಷೇತ್ರಗಳಲ್ಲಿ ನಾವು ನಾಯಕರಾಗಿ ಹೊರಹೊಮ್ಮುತ್ತಿದ್ದೇವೆ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಸುರೇಶ್ ಚಂದ್ರ ಮಹಾಪಾತ್ರ ಹೇಳಿದರು.
ಒಡಿಸ್ಸಾ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಮಂತ್ ಶರ್ಮಾ ಅವರು ‘ಮೇಕ್ ಇನ್ ಒಡಿಶಾ’ ಬಗ್ಗೆ ಪ್ರಾತ್ಯಕ್ಷಿಕ ನೀಡಿದರು ಮತ್ತು ಎರಡು ದಶಕಗಳಿಗೂ ಹೆಚ್ಚು ಕಾಲ ಸ್ಥಿರ ಆಡಳಿತದಿಂದಾಗಿ ರಾಜ್ಯದ ಸಾಧನೆಗಳನ್ನು ಎತ್ತಿ ತೋರಿಸಿದರು.
ಒಡಿಸ್ಸಾ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ಖನಿಜಗಳ ಕ್ಷೇತ್ರದಲ್ಲಿ ಅಗ್ರ ಆಯ್ಕೆಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.