News Karnataka Kannada
Tuesday, April 30 2024
ದೇಶ

57 ವರ್ಷ ಹಿಂದೆಯೇ ಅಂಚೆಚೀಟಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ವರ್ಷ ಪ್ರಕಟ !

ಅಯೋಧ್ಯೆ ರಾಮಮಂದಿರ ಹಿಂದೂಗಳ ಹಲವು ವರ್ಷಗಳ ಕನಸು. ಇದು ಈಗ ಪ್ರಾಣ ಪ್ರತಿಷ್ಠೆಯಾಗುತ್ತಿರುವುದು ಕನಸೋ ನನಸೋ ಎಂಬಷ್ಟು ಅಚ್ಚರಿಯಲ್ಲಿ ಜನರಿರುವಾಗ, 57 ವರ್ಷಗಳ ಹಿಂದೆಯೇ ನೇಪಾಳ ಇದನ್ನು ಊಹಿಸಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.
Photo Credit : News Kannada

ದೆಹಲಿ: ಅಯೋಧ್ಯೆ ರಾಮಮಂದಿರ ಹಿಂದೂಗಳ ಹಲವು ವರ್ಷಗಳ ಕನಸು. ಇದು ಈಗ ಪ್ರಾಣ ಪ್ರತಿಷ್ಠೆಯಾಗುತ್ತಿರುವುದು ಕನಸೋ ನನಸೋ ಎಂಬಷ್ಟು ಅಚ್ಚರಿಯಲ್ಲಿ ಜನರಿರುವಾಗ, 57 ವರ್ಷಗಳ ಹಿಂದೆಯೇ ನೇಪಾಳ ಇದನ್ನು ಊಹಿಸಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ವೈರಲ್ ಆಗಿರುವ ನೇಪಾಳದ ಅಂಚೆಚೀಟಿಯೊಂದು ಈ ಪ್ರಶ್ನೆಯೇಳಲು ಕಾರಣವಾಗಿದೆ. ರಾಮ ಮಂದಿರದ ಪ್ರತಿಷ್ಠಾಪನೆಯ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಈ ಸಂದರ್ಭದಲ್ಲಿ ನೇಪಾಳದಿಂದ 57 ವರ್ಷಗಳ ಹಿಂದೆ ಅಚ್ಚಾದ ಅಂಚೆ ಚೀಟಿಯ ಫೋಟೋವೊಂದು ಹೊರಬಿದ್ದಿದೆ. ಈ ಅಂಚೆಚೀಟಿಯನ್ನು ಏಪ್ರಿಲ್ 18, 1967ರಂದು ರಾಮ ನವಮಿಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿತ್ತು.

ಇದರ ಮೇಲೆ ರಾಮ ಸೀತೆಯ ಚಿತ್ರವಿದ್ದು, ಕೆಳಗೆ, ವಿ.ಎಸ್.(ವಿಕ್ರಮ ಸಂವತ್ಸರ ) 2024 ಎಂದು ಬರೆಯಲಾಗಿದೆ. ಇದು ರಾಮಮಂದಿರ ಉದ್ಘಾಟನೆಯ ವರ್ಷವನ್ನು ಆಗಲೇ ಊಹಿಸಿತ್ತೇ ಎಂಬ ಅಚ್ಚರಿಗೆ ದೂಡಿದೆ.

ಅಸಲಿಗೆ ನೇಪಾಳ ಮತ್ತು ಭಾರತದ ಕೆಲವು ಭಾಗಗಳಲ್ಲಿ ಅನುಸರಿಸುವ ಹಿಂದೂ ಕ್ಯಾಲೆಂಡರ್‌ನ ವಿಕ್ರಮ್ ಸಂವತ್‌ನ 2024 ವರ್ಷವನ್ನು ಅಂಚೆ ಚೀಟಿ ಮೇಲೆ ಹಾಕಲಾಗಿದೆ. ಆದರೆ, ಇದರ ನಿಜವಾದ ಕಾರಣ ಬೇರೆ ಇದೆ. ಏನೆಂದರೆ, ವಿಕ್ರಮ ಸಂವತ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 57 ವರ್ಷಗಳ ಮುಂದಿದೆ. ಆದ್ದರಿಂದ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ 1967 ರ ವರ್ಷವು ವಿಕ್ರಮ್ ಸಂವತ್‌ನಲ್ಲಿ 2024 ಆಗಿತ್ತು. ಆದ್ದರಿಂದ, 1967ರಲ್ಲಿ ಬಿಡುಗಡೆಯಾದ ಅಂಚೆಚೀಟಿಯ ಮೇಲೆ 2024 ಎಂದು ಬರೆಯಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು