News Karnataka Kannada
Friday, May 17 2024
ಹುಬ್ಬಳ್ಳಿ-ಧಾರವಾಡ

ಧಾರವಾಡದಲ್ಲಿ ಹಿಂದೂ ಹುಡುಗಿಯರೇ ಟಾರ್ಗೆಟ್ : ಯುವಕನನ್ನು ವಶಕ್ಕೆ ಪಡೆದ ಪೋಲಿಸರು

Photo Credit : News Kannada

ಧಾರವಾಡ: ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಅವರ ಮೊಬೈಲ್ ನಂಬರ್ ಪಡೆದು ಫಯಾಜ್ ಎಂಬ ಮುಸ್ಲಿಂ ಯುವಕ ಮೆಸೇಜ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಧಾರವಾಡದಲ್ಲಿ ಖಾಸಗಿ ಕಂಪೆನಿಯಲ್ಲೇ ಆತನಿಗೆ ಧರ್ಮದೇಟು ಕೊಟ್ಟಿದ್ದಾರೆ.

ಧಾರವಾಡದ ಜ್ಯುಬಿಲಿ ವೃತ್ತದ ಬಳಿ ಇರುವ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಫಯಾಜ್ ಎಂಬ ಮುಸ್ಲಿಂ ಯುವಕ ಕಂಪೆನಿಗೆ ಬರುತ್ತಿದ್ದ ಗ್ರಾಹಕರ ನಂಬ‌ರ್ ಪಡೆದು ಅವರಿಗೆ ವೀಡಿಯೋ ಕಾಲ್ ಮಾಡುವುದು, ಮೆಸೇಜ್ ಮಾಡುವುದು ಮಾಡುತ್ತಿದ್ದ. ಹಿಂದೂ ಯುವತಿಯರ ನಂಬರ್‌ನ್ನೇ ಪಡೆದು ಈತ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದ. ಈ ವಿಷಯ ತಿಳಿದು ಇಂದು ಸ್ಥಳಕ್ಕೆ ಹೋದ ಬಜರಂಗದಳ ಕಾರ್ಯಕರ್ತರು ಫಯಾಜ್‌ನಿಗೆ ಸ್ಥಳದಲ್ಲೇ ಧರ್ಮದೇಟು ಕೊಟ್ಟಿದ್ದಾರೆ.

ಯುವತಿಯರ ನಂಬರ್ ಪಡೆದು ಅವರಿಗೆ ನಯವಾಗಿ ಮೆಸೇಜ್ ಮಾಡಿ ಬಳಿಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇಂದು ಆ ಖಾಸಗಿ ಕಂಪೆನಿಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಯುವಕನಿಗೆ ಧರ್ಮದೇಟು ಕೊಟ್ಟು ಉಪನಗರ ಪೊಲೀಸರ ವಶಕ್ಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು