News Karnataka Kannada
Monday, May 13 2024
ಮೈಸೂರು

ರಾಮಮಂದಿರಕ್ಕಾಗಿ ಮೈಸೂರಿನಿಂದ ಅಯೋಧ್ಯೆ ತಲುಪಿದ ಶಿಲೆ

Two rocks from Mysuru reached Ayodhya
Photo Credit : By Author

ಮೈಸೂರು: ಮೈಸೂರಿನಿಂದ ಕಳುಹಿಸಲಾದ ಎರಡು ಶಿಲೆಗಳು ಬುಧವಾರ ಉತ್ತರ ಪ್ರದೇಶದ ಅಯೋಧ್ಯೆಯನ್ನು ತಲುಪಿವೆ. ಇವುಗಳಲ್ಲಿ ಒಂದು ಕಪ್ಪು ಬಣ್ಣದಲ್ಲಿದ್ದರೆ, ಇನ್ನೊಂದು ಒಳಗೆ ಹಳದಿ ಬಣ್ಣದಲ್ಲಿದೆ.

ಈ ಶಿಲೆಗಳನ್ನು ರಾಮಸೇವಕ ಪುರಂನಲ್ಲಿರುವ ದೇವಾ ಬಂಡೆಗಳ ಬಳಿ ಇರಿಸಲಾಗಿದೆ. ಶಿಲ್ಪ ತಜ್ಞರು ವಿಗ್ರಹದ ಆಕಾರ ಮತ್ತು ಗಾತ್ರದ ಬಗ್ಗೆ ನಿರಂತರವಾಗಿ ಚಿಂತನ ಮಂಥನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವರ ಪ್ರತಿಷ್ಠಾಪನೆಗಾಗಿ ಕಲ್ಲುಗಳನ್ನು ಪರಿಶೀಲಿಸುವ ಮತ್ತು ಆಯ್ಕೆ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ವಾಸ್ತು ತಜ್ಞರು ಬಂಡೆಗಳನ್ನು ಪರಿಶೀಲಿಸುತ್ತಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ದೇಶದಲ್ಲಿ ಇಂತಹ ಶಿಲೆಗಳು ಲಭ್ಯವಿರುವಲ್ಲಿಂದ ತರಿಸಲಾಗುತ್ತಿದೆ.  ಈ ಕಲ್ಲುಗಳಿಂದ ವಿಗ್ರಹಗಳನ್ನು ತಯಾರಿಸುವುದು ಕಡ್ಡಾಯವಲ್ಲ. ಕಲ್ಲನ್ನು ಸರಿಪಡಿಸಿದ ನಂತರ, ಶಿಲ್ಪಿ ಆ ಕಲ್ಲಿನಿಂದ ಪ್ರತಿಮೆಯನ್ನು ತಯಾರಿಸಬಹುದೇ ಅಥವಾ ಇಲ್ಲವೇ ಎಂದು ನಿರ್ಧರಿಸುತ್ತಾನೆ. ಎಲ್ಲಾ ಕಲ್ಲುಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ವಿಗ್ರಹ ತಯಾರಕರಿಗೆ ತೋರಿಸಲಾಗುತ್ತದೆ. ಶಿಲ್ಪಕಲೆ ತಜ್ಞರ ಒಪ್ಪಿಗೆ ಪಡೆದ ನಂತರವೇ ರಾಮಲಲ್ಲಾ ವಿಗ್ರಹದ ನಿರ್ಮಾಣ ಕಾರ್ಯ  ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ರಾಮವಿಗ್ರಹಕ್ಕೆ ಶಾಲಗ್ರಾಮ ಶಿಲೆ: ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಕೆತ್ತಲು ಫೆಬ್ರವರಿ ಮೊದಲ ವಾರದಲ್ಲಿ ನೇಪಾಳದಿಂದ ಎರಡು ಅಪರೂಪದ ಶಾಲಿಗ್ರಾಮ ಬಂಡೆಗಳು ಅಯೋಧ್ಯೆಗೆ ಬಂದಿವೆ. ರಾಮಜನ್ಮಭೂಮಿ ಟ್ರಸ್ಟ್ ಗೆ ಹಸ್ತಾಂತರಿಸುವ ಮೊದಲು ದೇವಾಲಯದ ಅರ್ಚಕರು ಹೂಮಾಲೆ ಹಾಕಿ ಪವಿತ್ರ ಆಚರಣೆಗಳನ್ನು ನೆರವೇರಿಸಿದ್ದರು. 60 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಶಾಲಿಗ್ರಾಮ ಬಂಡೆಗಳು ನೇಪಾಳದಿಂದ ಎರಡು ವಿಭಿನ್ನ ಟ್ರಕ್ ಗಳಲ್ಲಿ ಅಯೋಧ್ಯೆಯನ್ನು ತಲುಪಿದ್ದವು. ಒಂದು ಬಂಡೆ 26 ಟನ್ ತೂಕವಿದ್ದರೆ, ಇನ್ನೊಂದು 14 ಟನ್ ತೂಕವಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಕಚೇರಿಯ ಉಸ್ತುವಾರಿ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

ಅಯೋಧ್ಯೆಯ ಭವ್ಯ ರಾಮ ಮಂದಿರದ ಗರ್ಭಗುಡಿಯಲ್ಲಿ ಒಂಬತ್ತು ಅಡಿ ಎತ್ತರದಲ್ಲಿ ರಾಮನ ಹೊಸ ವಿಗ್ರಹವನ್ನು ಸ್ಥಾಪಿಸಲಾಗುವುದು ಮತ್ತು ಅದರ ನಿರ್ಮಾಣದಲ್ಲಿ ಅತ್ಯುತ್ತಮ ಶಿಲ್ಪಿಗಳು ಭಾಗಿಯಾಗಲಿದ್ದಾರೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ. ದಶಕಗಳ ಸುದೀರ್ಘ ಕಾನೂನು ಹೋರಾಟದ ನಂತರ, 1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಸುಪ್ರೀಂ ಕೋರ್ಟ್ 2019 ರ ನವೆಂಬರ್ 9 ರಂದು ದಾರಿ ಮಾಡಿಕೊಟ್ಟಿತು. ಆಗಸ್ಟ್ 5, 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು