News Karnataka Kannada
Saturday, April 27 2024
ಅಸ್ಸಾಂ

ಗುವಾಹಟಿ: ವನ್ಯಪ್ರಾಣಿ ಸಾವು ತಡೆಗೆ ರೈಲ್ವೆಯಲ್ಲಿ ಕೃತಕಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆ

Railways to install artificial intelligence technology to prevent wildlife deaths
Photo Credit : IANS

ಗುವಾಹಟಿ: ವನ್ಯಪ್ರಾಣಿ ಸಾವು ತಡೆಗೆ ರೈಲ್ವೆಯಲ್ಲಿ ಕೃತಕಬುದ್ಧಿಮತ್ತೆ ಅಳವಡಿಕೆ ಗುವಾಹಟಿ: ರೈಲಿಗೆ ಸಿಲುಕಿ ಆನೆಗಳು ಸೇರಿದಂತೆ ಕಾಡುಪ್ರಾಣಿಗಳು ಸಾವನ್ನಪ್ಪುವದನ್ನು ತಡೆಯಲು ಈಶಾನ್ಯ ರೈಲ್ವೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧಾರಿತ ಐಡಿಎಸ್‌ ಸ್ಥಾಪನೆಗೆ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಕಾಡು ಪ್ರಾಣಿಗಳು, ವಿಶೇಷವಾಗಿ ಆನೆಗಳು, ಟ್ರ್ಯಾಕ್‌ ನಲ್ಲಿ ಇರುವುದನ್ನು ಪತ್ತೆಹಚ್ಚಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಈ ಪೈಕಿ ಪ್ರಮುಖ ವಿಭಾಗಗಳಲ್ಲಿ ಐಡಿಎಸ್ ಅನ್ನು ಸ್ಥಾಪಿಸುವುದು ಒಂದಾಗಿದೆ ಎಂದು ವಿವರಿಸಿದರು. ಸೋಮವಾರ ಗುವಾಹಟಿಯ ಮಾಲಿಗಾಂವ್‌ನಲ್ಲಿ ಎನ್‌ಎಫ್‌ಆರ್ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.

“ಪಶ್ಚಿಮ ಬಂಗಾಳದ ಚಲ್ಸಾ-ಹಸಿಮಾರಾ ವಿಭಾಗದಲ್ಲಿ ಮತ್ತು ಅಸ್ಸಾಂನ ಲಂಕಾ-ಹವಾಯಿಪುರ ವಿಭಾಗದಲ್ಲಿ ಕೈಗೊಂಡ ಐಡಿಎಸ್ ಮೇಲಿನ ಪ್ರಾಯೋಗಿಕ ಯೋಜನೆಯ ಯಶಸ್ಸಿನ ನಂತರ ವಿವಿಧ ಭಾಗಗಳಲ್ಲಿ ಈ ವ್ಯವಸ್ಥೆ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಆಧರಿಸಿದೆ. ಅಪ್ಟಿಕಲ್‌ ಪೈಬರ್‌ ಕೇಬಲ್‌ಗಳು ಕಾಡು ಪ್ರಾಣಿಗಳ ಚಲನವಲನಗಳನ್ನು ಗುರುತಿಸುತ್ತವೆ. ಅಲ್ಲದೇ ನಿಯಂತ್ರಣ ಕಚೇರಿಗಳು, ಸ್ಟೇಷನ್ ಮಾಸ್ಟರ್‌ಗಳು, ಗೇಟ್‌ಮ್ಯಾನ್ ಮತ್ತು ಲೊಕೊ ಪೈಲಟ್‌ಗಳನ್ನು ಎಚ್ಚರಿಸುತ್ತವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು