ಕೊಚ್ಚಿ: ಇಂದು ದೇಶದೆಲ್ಲೆಡೆ ವಿಜಯದಶಮಿ ಆಚರಣೆ ನಡೆಯುತ್ತಿದೆ. ಕೇರಳದಲ್ಲಿ ಈ ಆಚರಣೆಯನ್ನು “ಎಝುತಿನಿರುತ್ತು” ದೀಕ್ಷಾ ಆಚರಣೆ ಮಾಡಲಾಗುತ್ತದೆ. ಇದನ್ನು “ವಿದ್ಯಾರಂಭಂ” ಎಂದು ಕೂಡ ಕರೆಯುತ್ತಾರೆ.
ಕೇರಳದ ಬೇರೆ ಬೇರೆ ಭಾಗದ ಮಕ್ಕಳಿಗೆ ಈ ಮೂಲಕ ವಿದ್ಯಾಭ್ಯಾಸ ನೀಡಲಾಗುವುದು. ಅಕ್ಷರಾಭ್ಯಾಸದ ಮೂಲಕ ಮಕ್ಕಳ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುವುದು ಇದರ ಮುಖ್ಯ ಕೆಲಸವಾಗಿದೆ. ಈ ಹಬ್ಬವನ್ನು ವಿಜಯದಶಮಿಯಂದು ಆಚರಣೆ ಮಾಡಲಾಗುವುದು. ಇಂದು ಕೇರಳದ ಅನೇಕ ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ ಇದನ್ನು ಆಚರಣೆ ಮಾಡುತ್ತಾರೆ.
ಇದು ಹಿಂದೂ ಧರ್ಮ ಪೂಜಾ ಕಲಿಕೆಯ ಒಂದು ಪದ್ಧತಿಯಾಗಿದೆ. ಕೇರಳ ರಾಜಭವನದಲ್ಲೂ ವಿದ್ಯಾರಂಭಂ ಸಮಾರಂಭವನ್ನು ಆಯೋಜಿಸಿತ್ತು, ಅಲ್ಲಿ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ಅಕ್ಕಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
ಇನ್ನು ವಿದ್ಯಾರಂಭಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಭಾಗವಹಿಸಿದರು. ಜತೆಗೆ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸಿದ್ದಾರೆ. ದೇಶದಲ್ಲಿ ವಿಭಿನ್ನ ರೀತಿಯಲ್ಲಿ ವಿಜಯದಶಮಿಯನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಕೇರಳ ಅಕ್ಷರಾಭ್ಯಾಸ ಮಾಡಿಸುವ ಮೂಲಕ ವಿಜಯದಶಮಿಯನ್ನು ಆಚರಣೆ ಮಾಡುತ್ತಿದೆ ಎಂದು ಹೇಳಿದ್ದರು.