ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ 71 ಮಂದಿ ಸಾವನ್ನಪ್ಪಿದ್ದಾರೆ. ಶಿಮ್ಲಾ ಸೇರಿದಂತೆ ಹಲವು ಜಿಲ್ಲೆಗಳು ಬಾಧಿತವಾಗಿವೆ. ಇದಕ್ಕೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇನ್ಸ್ಟಾಗ್ರಾಮ್ ನಲ್ಲಿ ದುಃಖದ ಸಂದೇಶವೊಂದನ್ನು ಶೇರ್ ಮಾಡಿದ್ದಾರೆ. “ಹಿಮಾಚಲ ಪ್ರದೇಶದ ಜನರು ದುರಂತವನ್ನು ಎದುರಿಸುತ್ತಿದ್ದಾರೆ. ಭಾರೀ ಮಳೆ ಮತ್ತು ಪ್ರವಾಹಕ್ಕೆ ಅಂತ್ಯವಿಲ್ಲ, ಪರ್ವತಗಳು ಜಾರುತ್ತಿವೆ, ಎಲ್ಲೆಂದರಲ್ಲಿ ಕುಸಿಯುತ್ತಿವೆ. ವಿದ್ಯುತ್ ಅಥವಾ ನೀರು ಇಲ್ಲ, ಒಟ್ಟು ವ್ಯವಸ್ಥೆಯು ಛಿದ್ರಗೊಂಡಿದೆ. ನನ್ನ ಹೃದಯವು ಛಿದ್ರಗೊಂಡಿದೆ. ಪರ್ವತದ ಜನರ ಯೋಗಕ್ಷೇಮಕ್ಕಾಗಿ ನಾನು ನಿರಂತರವಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಇನ್ ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಒಟ್ಟು ವ್ಯವಸ್ಥೆಯೇ ಛಿದ್ರವಾಗಿದೆ: ನಟಿ ಕಂಗನಾ ಹೀಗೆ ಹೇಳಿದ್ಯಾಕೆ
Photo Credit :
IANS
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.