ಭುವನೇಶ್ವರ: ದಿಬ್ರುಗಢ-ಕನ್ಯಾಕುಮಾರಿ ವಿವೇಕ್ ಎಕ್ಸ್ಪ್ರೆಸ್ ರೈಲು ಬ್ರಹ್ಮಪುರ ರೈಲು ನಿಲ್ದಾಣದ ಬಳಿ ಸಾಗುತ್ತಿದ್ದ ವೇಳೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿತು. ತಕ್ಷಣವೇ ಪ್ರಯಾಣಿಕರನ್ನು ರೈಲಿನಿಂದ ಇಳಿಯಲು ರೈಲು ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ರೈಲು ವ್ಯಾಗನ್ ಅನ್ನು ದುರಸ್ತಿ ಮಾಡಿ 30 ನಿಮಿಷಗಳ ನಂತರ ರೈಲು ಮರು ಪ್ರಯಾಣ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ರೈಲಿನ ಎಸ್-10 ಕೋಚ್ನಲ್ಲಿ ಬ್ರೇಕ್ ಬೈಂಡಿಂಗ್ ಸಮಸ್ಯೆಯಿಂದ ಹೊಗೆ ಕಾಣಿಸಿಕೊಂಡಿದ್ದು, ರೈಲು ಗಾಲಿಗಳಲ್ಲಿ ಗೋಣಿಚೀಲ ಸಿಲುಕಿಕೊಂಡು ಘಟನೆ ಹೊಗೆ ಕಾಣಿಸಿಕೊಂಡಿತ್ತು. ನಂತರ ಗೋಣಿಚೀಲವನ್ನು ಗಾಲಿಗಳಿಂದ ಬೇರ್ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ನಂತರ ಸುರಕ್ಷಿತವಾಗಿ ಬ್ರಹ್ಮಪುರ ನಿಲ್ದಾಣ ತಲುಪಿದೆ.