ಇಂಫಾಲ: ನಾನು ಸೇನೆಗೆ ಸೇರಲು ಬಯಸಿದ್ದೆ ಆದರೆ ಕುಟುಂಬದಲ್ಲಿನ ಸಮಸ್ಯೆಗಳಿಂದ ಸಾಧ್ಯವಾಗಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಣಿಪುರದಲ್ಲಿ ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್ ಮತ್ತು 57 ನೇ ಮೌಂಟೇನ್ ವಿಭಾಗದ ಸಿಬಂದಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ನಾನು ಸಹ ಸೈನ್ಯಕ್ಕೆ ಸೇರಲು ಬಯಸಿದ್ದೆ, ಮತ್ತು ಒಮ್ಮೆ ನಾನು ಶಾರ್ಟ್ ಸರ್ವಿಸ್ ಆಯೋಗದ ಪರೀಕ್ಷೆಗೆ ಹಾಜರಾಗಿ ಲಿಖಿತ ಪರೀಕ್ಷೆಯನ್ನು ನೀಡಿದ್ದೆ. ಆದರೆ, ನನ್ನ ಕುಟುಂಬದಲ್ಲಿನ ಕೆಲವು ಸನ್ನಿವೇಶಗಳಿಂದಾಗಿ, ನನ್ನ ತಂದೆಯ ಸಾವಿನಿಂದ ನಾನು ಸೇನೆಗೆ ಸೇರಲು ಸಾಧ್ಯವಾಗಲಿಲ್ಲ” ಎಂದರು.
ನನ್ನ ಮಣಿಪುರ ಭೇಟಿಯನ್ನು ಯೋಜಿಸಿದಾಗ, ನಾನು ಅಸ್ಸಾಂ ರೈಫಲ್ಸ್ ಮತ್ತು 57 ನೇ ಪರ್ವತ ವಿಭಾಗದ ಪಡೆಗಳನ್ನು ಭೇಟಿಯಾಗಲು ಬಯಸುತ್ತೇನೆ ಎಂದು (ಸೇನಾ ಮುಖ್ಯಸ್ಥ) ಪಾಂಡೆ ಜಿಯನ್ನು ಕೇಳಿದ್ದೆ. ಸೇನಾ ಸಿಬಂದಿಯನ್ನು ಭೇಟಿಯಾಗುವುದು ನನಗೆ ಹೆಮ್ಮೆಯ ಭಾವನೆಯನ್ನು ನೀಡುತ್ತದೆ” ಎಂದರು.