ಭುವನೇಶ್ವರ್: ಬಾಲಸೋರ್ ರೈಲು ಅಪಘಾತದಲ್ಲಿ ಬಲಿಯಾದವರನ್ನು ಗುರುತಿಸಲು ಅನುಕೂಲವಾಗುವಂತೆ, ಒಡಿಶಾ ಸರ್ಕಾರವು ಮೂರು ವೆಬ್ಸೈಟ್ಗಳಲ್ಲಿ ಪ್ರಯಾಣಿಕರ ವಿವರಗಳನ್ನು ಅಪ್ಲೋಡ್ ಮಾಡಿದೆ.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರ ಪಟ್ಟಿಯನ್ನು ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಲಾಗಿದೆ: https://srcodisha.nic.in/, https://www.bmc.gov.in, ಮತ್ತು https://www.osdma.org. ಈ ಪಟ್ಟಿ ಲಭ್ಯವಿದೆ. ಮೃತ ಪ್ರಯಾಣಿಕರ ಪಟ್ಟಿಗಳು ಮತ್ತು ಛಾಯಾಚಿತ್ರಗಳನ್ನು ಗುರುತಿಸಲು ಅನುಕೂಲವಾಗುವಂತೆ ಮೇಲಿನ ವೆಬ್ಸೈಟ್ಗಳಲ್ಲಿ ವಿವರ ಅಪ್ಲೋಡ್ ಮಾಡಲಾಗಿದೆ. ಆದರೆ ಈ ಚಿತ್ರಗಳನ್ನು ವೀಕ್ಷಿಸುವುದನ್ನು ತಪ್ಪಿಸುವಂತೆ ಸರ್ಕಾರ ಮಕ್ಕಳಿಗೆ ಸಲಹೆ ನೀಡಿದೆ.
ಒಡಿಶಾದ ವಿಶೇಷ ಪರಿಹಾರ ಆಯುಕ್ತರ ಪೂರ್ವ ಲಿಖಿತ ಅನುಮೋದನೆಯಿಲ್ಲದೆ ಯಾರೂ (ಮಾಧ್ಯಮ/ವೈಯಕ್ತಿಕ/ಸಂಸ್ಥೆಗಳು, ಇತ್ಯಾದಿ) ಯಾವುದೇ ಉದ್ದೇಶಕ್ಕಾಗಿ ಚಿತ್ರಗಳನ್ನು ಪ್ರಕಟಿಸಲು ಮತ್ತು ಬಳಸುವಂತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಭುವನೇಶ್ವರ ಮುನ್ಸಿಪಲ್ ಕಮಿಷನರ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಭುವನೇಶ್ವರ ಮುನ್ಸಿಪಲ್ ಕಮಿಷನರ್ ಸಹಾಯವಾಣಿ ಸಂಖ್ಯೆ ನೀಡಿದೆ. ಜೊತೆಗೆ, ಎಲ್ಲಾ ಪ್ರವೇಶ ಕೇಂದ್ರಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೃತರ ಟುಂಬ/ಸ್ನೇಹಿತರು/ಸಂಬಂಧಿಗಳು ಮತ್ತು ದುರಂತ ರೈಲು ಅಪಘಾತದಲ್ಲಿ ಸಿಲುಕಿರುವ ಪ್ರಯಾಣಿಕರು ಸಹಾಯಕ್ಕಾಗಿ 24 ಗಂಟೆಗಳ ಟೋಲ್ ಫ್ರೀ ಸಂಖ್ಯೆ 18003450061/1929 ಸಂಪರ್ಕಿಸಬಹುದು.
ನೋಡಲ್ ಅಧಿಕಾರಿಗಳನ್ನು ಸಹ ಸಂಪರ್ಕಿಸಬಹುದು ಅವರ ಸಂಪರ್ಕ ಸಂಖ್ಯೆ ಹೀಗಿದೆ. ರಾಜೇಶ್ ಪ್ರಧಾನ್: 6370946287; ಆಸಿಶ್ ಪತ್ರ: 7978095293; ದೇಬಾಶಿಶ್ ಮಿಶ್ರಾ:6370585221; ದೀಪಕ್ ಕುಮಾರ್ ರೌಟ್: 8249217415, ಮತ್ತು ಸಂದೀಪ್ ಮೊಹರಣ: 8847822559.