ದೆಹಲಿ: ಲೋಕಸಭೆಯಲ್ಲಿ ಕಾಸಿಗಾಗಿ ಪ್ರಶ್ನೆ ಕೇಳಿದ ಆರೋಪದಲ್ಲಿ ಇಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಉಚ್ಚಾಟನೆ ಆಗುವ ಸಾಧ್ಯತೆ ಇದೆ. ಲೋಕಸಭೆಯ ಎಥಿಕ್ಸ್ ಸಮಿತಿ ಅಧಿವೇಶನದಲ್ಲಿ ವರದಿ ಮಂಡನೆ ಮಾಡುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕುರಿತಾದ ನೀತಿ ಸಂಹಿತೆ ಸಮಿತಿಯ ವರದಿ ಇಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಹೀಗಾಗಿ ಸಂಸತ್ ಕಲಾಪಕ್ಕೆ ಆಗಮಿಸಿದ ಸಂಸದೆ ಮಹುವಾ ಮೊಯಿತ್ರಾ ಅವರು ನೋಡೋಣ ಏನಾಗುತ್ತೆ. ಬಿಜೆಪಿಯವರು ‘ವಸ್ತ್ರಾಹರಣ’ ಪ್ರಾರಂಭಿಸಿದ್ದಾರೆ. ಈಗ ನೀವು ಮಹಾಭಾರತದ ಯುದ್ಧಭೂಮಿಯನ್ನು ನೋಡುತ್ತೀರಿ. ದುರ್ಗಾ ಮಾತೆಯ ಆಶೀರ್ವಾದ ನಮಗಿದೆ ಎಂದು ಹೇಳಿದ್ದಾರೆ.
ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಧಾನಿ ಮೋದಿ ಮತ್ತು ಉದ್ಯಮಿ ಅದಾನಿ ವಿರುದ್ಧ ಸಂಸತ್ತಲ್ಲಿ ಪ್ರಶ್ನೆ ಕೇಳಲು ಹಣ, ಉಡುಗೊರೆ ಪಡೆದ ಆರೋಪವಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪ ಮಾಡಿ ಲೋಕಸಭೆ ಸ್ಪೀಕರ್ಗೆ ದೂರು ನೀಡಿದ್ದರು.
ಸ್ಪೀಕರ್ ಇದನ್ನು ಲೋಕಸಭೆಯ ಎಥಿಕ್ಸ್ ಸಮಿತಿಗೆ ಶಿಫಾರಸು ಮಾಡಿದ್ದರು. ಎಥಿಕ್ಸ್ ಸಮಿತಿಯು ಮಹುವಾ ಹಾಗೂ ನಿಶಿಕಾಂತ್ ದುಬೆ ಅವರನ್ನ ಕರೆಸಿ ವಿಚಾರಣೆ ಮಾಡಿತ್ತು.ಇದಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಸಂಸತ್ತಿನಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ.