ನವದೆಹಲಿ: ಚುನಾವಣಾ ಪ್ರಕ್ರಿಯೆಗಳ ಮೇಲೆ ತನ್ನ ಹಿಡಿತ ಇರದ ಕಾರಣ ಚುನಾವಣಾ ಆಯೋಗಕ್ಕೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಇವಿಎಮ್ ಹಾಗು ವಿವಿಪ್ಯಾಟ್ಗಳ ನಡುವಿನ ಮತಗಳ ಲೆಕ್ಕವನ್ನು ಪುನರ್ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.
ಇಂತಹ ಸಂದೇಹಗಳು ಉಂಟಾದಾಗ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಬಹುದೇ ಎಂದು ಸಂಜೀವ್ ಖನ್ನಾ ಮತ್ತು ದೀಪಾನ್ಕರ್ ದತ್ತಾ ಕೇಳಿದ ಪ್ರಶ್ನೆಗೆ ಸುಪ್ರೀಂ ಈ ರೀತಿ ಉತ್ತರಿಸಿದ್ದು, ಯಾರ ಯೋಚನಾ ಶೈಲಿಯನ್ನು ನಾವು ಬದಲಿಸಲು ಸಾಧ್ಯವಿಲ್ಲ ಎಂದಿದೆ.
ಚುನಾವಣೆಗಳಲ್ಲಿ ಇವಿಎಂ ಬಳಕೆಯ ಬಗ್ಗೆ ವಿರೋಧ ಕೇಳಿಬರುತ್ತಿರುವಾಗ, ಮತಗಳ ಪುನರ್ಪರಿಶೀಲನೆಗೆ ಅನುವು ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಸ್ತುತ ಇಂತಹ ಪರೀಕ್ಷೆಯನ್ನು ಕೆಲ ಇವಿಎಂಗಳ ಮೇಲೆ ಮಾಡಲಾಗಿದೆ.