ನವದೆಹಲಿ: ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾದ ನಂತರ ನಗರವೆಲ್ಲ ಜಲಾವೃತವಾಗಿದೆ. ಅನೇಕರು ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದಾರೆ.. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈನಲ್ಲಿ ಮೊದಲ ನಗರ ಪ್ರವಾಹ ತಗ್ಗಿಸುವ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ.
ಚೆನ್ನೈ ಜಲಾನಯನ ಯೋಜನೆಯಲ್ಲಿ “ಸಮಗ್ರ ನಗರ ಪ್ರವಾಹ ನಿರ್ವಹಣೆ” ಚಟುವಟಿಕೆಗಳಿಗೆ ₹ 561.29 ಕೋಟಿ ಮೀಸಲಿಡಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಇಂದು ಘೋಷಿಸಿದ್ದಾರೆ. ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ಮುಳುಗಿರುವ ಹೊತ್ತಲ್ಲೇ ಈ ಘೋಷಣೆ ಬಂದಿದೆ. ಧಾರಾಕಾರ ಮಳೆಯಿಂದಾಗಿ ನಗರ ಸಂಪೂರ್ಣ ಜವಾವೃತವಾಗಿದ್ದು, ಇದು ಸುಧಾರಿತ ಪ್ರವಾಹ ತಡೆಗಟ್ಟುವ ಕ್ರಮಗಳ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸುತ್ತದೆ.
“ಚೆನ್ನೈ ಮಹಾಪ್ರವಾಹವನ್ನು ಎದುರಿಸುತ್ತಿದೆ, ಕಳೆದ ಎಂಟು ವರ್ಷಗಳಲ್ಲಿ ಸಂಭವಿಸುತ್ತಿರುವ ಮೂರನೇಯದು. ಮೆಟ್ರೋಪಾಲಿಟನ್ ನಗರಗಳು ಅಧಿಕ ಮಳೆಯನ್ನು ಪಡೆಯುವ ಹೆಚ್ಚಿನ ನಿದರ್ಶನಗಳನ್ನು ನಾವು ನೋಡುತ್ತಿದ್ದೇವೆ, ಇದು ಹಠಾತ್ ಪ್ರವಾಹಕ್ಕೆ ಕಾರಣವಾಗುತ್ತದೆ ಎಂದು ಅಮಿತ್ ಶಾ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.
ಸಕ್ರಿಯ ವಿಧಾನದಿಂದ ಮಾರ್ಗದರ್ಶಿಸಲ್ಪಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಅಡಿಯಲ್ಲಿ ‘ಚೆನ್ನೈ ಜಲಾನಯನ ಯೋಜನೆಗಾಗಿ ಸಮಗ್ರ ನಗರ ಪ್ರವಾಹ ನಿರ್ವಹಣೆ ಚಟುವಟಿಕೆಗಳಿಗೆ’ ₹ 561.29 ಕೋಟಿ ಮೊತ್ತದ ಮೊದಲ ನಗರ ಪ್ರವಾಹ ತಗ್ಗಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಕೇಂದ್ರದ ನೆರವು ₹ 500 ಕೋಟಿ ಆಗಿದೆ ಎಂದು ಅವರು ಹೇಳಿದ್ದಾರೆ.
Chennai is facing major floods, the third such occurring in the last eight years. We are witnessing more instances of metropolitan cities receiving excessive rainfall, leading to sudden flooding.
Guided by a pro-active approach, PM @narendramodi Ji has approved the first urban…
— Amit Shah (@AmitShah) December 7, 2023