ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ವಿಷಯವನ್ನು ದೊಡ್ಡದು ಮಾಡಿ ವಿಶ್ವ ವೇದಿಕೆಗಳಲ್ಲಿ ಈ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸುತ್ತಿರುವ ಕೆನಡಾಕ್ಕೆ ಕವಡೆ ಕಾಸಿನ ಕಿಮ್ಮತ್ತು ದೊರೆಯುತ್ತಿಲ್ಲ. ಆದರೆ ಕೆನಡಾ ಈ ವಿಚಾರವನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಎಲ್ಲ ಕಡೆ ಪ್ರಸ್ತಾಪಿಸುತ್ತಿದೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ವಾರಾಂತ್ಯದಲ್ಲಿ ಅನೇಕ ವಿಶ್ವ ನಾಯಕರೊಂದಿಗಿನ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಜೋರ್ಡಾನ್ ಕಿಂಗ್ ಕಿಂಗ್ ಅಬ್ದುಲ್ಲಾ II ಬಿನ್ ಅಲ್-ಹುಸೇನ್ ಅವರೊಂದಿಗಿನ ಸಭೆಗಳಲ್ಲಿ ಟ್ರುಡೊ ಅವರು ಭಾರತ ಕೆನಡಾ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಯುಎಇ ಅಧ್ಯಕ್ಷರೊಂದಿಗಿನ ಟ್ರುಡೊ ಅವರ ಭೇಟಿಯ ಬಗ್ಗೆ ಇದೇ ರೀತಿಯ ಮಾಹಿತಿ ನೀಡಿದೆ. ಈ ವಾರದ ಆರಂಭದಲ್ಲಿ, ಅವರು ಸುನಕ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕೆನಡಾವು ಭಾರತೀಯ ನಗರಗಳಿಂದ ತನ್ನ ರಾಜತಾಂತ್ರಿಕರನ್ನು ಹೊರತೆಗೆದು ಮಲೇಷ್ಯಾ ಮತ್ತು ಸಿಂಗಾಪುರಕ್ಕೆ ಸ್ಥಳಾಂತರಿಸಿದ ನಂತರ ಭಾರತದೊಂದಿಗೆ ಗಲಭೆ ತಗ್ಗಿಸುವ ಪ್ರಾಮುಖ್ಯತೆಯನ್ನು ಚರ್ಚಿಸಿದರು.
On the phone today, His Highness @MohamedBinZayed and I spoke about the current situation in Israel. We expressed our deep concern and discussed the need to protect civilian life. We also spoke about India and the importance of upholding – and respecting – the rule of law.
— Justin Trudeau (@JustinTrudeau) October 8, 2023