ದೆಹಲಿ : ಪತಿಯ ಆಯಸ್ಸು ವೃದ್ಧಿಯನ್ನು ಬಯಸಿ, ಪತ್ನಿಯರು ಕರ್ವಾ ಚೌತ್ ವೃತ ಮಾಡ್ತಾರೆ. ನಿನ್ನೆ ಎಲ್ಲೆಡೆ ಕರ್ವಾ ಚೌತ್ ಆಚರಣೆ ಮಾಡಲಾಗಿದೆ. ಈ ವೇಳೆ ಮನೆಗೆ ಬಂದ ಪತಿಯನ್ನು, ಪತ್ನಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ. ಪತಿ ರಾಜೀವ್ ಎಂಬಾತನ ಮೇಲೆ ಹತ್ಯೆ ಆರೋಪವಿದೆ. ಇಬ್ಬರ ಮೇಲೆ ಆತ ಗುಂಡು ಹಾರಿಸಿದ್ದ ಎನ್ನಲಾಗಿದೆ. ಗುಂಡು ತಾಯಿ ಹಾಗೂ ಮಗಳಿಗೆ ತಾಗಿತ್ತು. ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು ಘಟನೆ ದೆಹಲಿಯಲ್ಲಿ ನಡೆದಿದೆ.
ಸಾವಿನ ನಂತ್ರ ರಾಜೀವ್ ನಾಪತ್ತೆಯಾಗಿದ್ದ. ಕರ್ವಾ ಚೌತ್ ದಿನ ಪತ್ನಿ ಭೇಟಿಯಾಗಲು ಬಂದಿದ್ದಾನೆ. ಈ ವೇಳೆ ಪತ್ನಿ, ಪೊಲೀಸರಿಗೆ ಕರೆ ಮಾಡಿದ್ದಾಳೆ. ನನ್ನ ಪತಿ ಮನೆಗೆ ಬಂದಿದ್ದಾನೆ. ಆದ್ರೆ ಆತನ ಮೇಲೆ ಗುಂಡು ಹಾರಿಸಬೇಡಿ. ನಾನು ಕರ್ವಾ ಚೌತ್ ವೃತವಿಟ್ಟುಕೊಂಡಿದ್ದೇನೆಂದು ಆಕೆ ಹೇಳಿದ್ದಾಳೆ.
ಮಹಿಳೆ ಕರೆ ನಂತ್ರ ಸ್ಥಳಕ್ಕೆ ಬಂದ ಪೊಲೀಸರು, ಪತಿಯನ್ನು ಬಂಧಿಸಿದ್ದಾರೆ.