ನವದೆಹಲಿ: ಬಿಹಾರದಿಂದ ಏಳು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಒಂದು ಬಾರಿ ಲೋಕಸಭೆಗೂ ಚುನಾಯಿತರಾಗಿದ್ದ ಜನತಾದಳ(ಸಂಯುಕ್ತ)ದ ರಾಜ್ಯಸಭಾ ಸದಸ್ಯ ಮತ್ತು ಕೈಗಾರಿಕೋದ್ಯಮಿ ಮಹೇಂದ್ರ ಪ್ರಸಾದ್ (81) ಅವರು ದೀರ್ಘಕಾಲಿಕ ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಸಾದ್ ಅವರು ಬಿಹಾರದಿಂದ ಏಳು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಒಂದು ಬಾರಿ ಲೋಕಸಭೆಗೂ ಚುನಾಯಿತರಾಗಿದ್ದರು.
ಪ್ರಸಾದ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅರಿಸ್ಟೋ ಫಾರ್ಮಾಸ್ಯೂಟಿಕಲ್ಸ್ನ ಸಂಸ್ಥಾಪಕರಾದ ಪ್ರಸಾದ್ ಅವರ ಅಗಲಿಕೆ ಸಮಾಜ, ರಾಜಕಾರಣ ಮತ್ತು ಉದ್ಯಮ ಕ್ಷೇತ್ರಗಳಿಗಾದ ಭಾರಿ ನಷ್ಟ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.