ಮಂಡಲ ಪೂಜೆ ನಡೆಯುವ ಮೂಲಕ 41 ದಿನಗಳ ಕಾಲ ನಡೆದ ಶಬರಿಮಲೆಯ ಅಯ್ಯಪ್ಪಸ್ವಾಮಿ ದರುಶನ ಭಾನುವಾರಕ್ಕೆ ಸಂಪನ್ನವಾಗಿದೆ. ಈ ಬಾರಿ ಶಬರಿಮಲೆಗೆ ಕೊರೋನಾ ಭೀತಿಯ ನಡುವೆಯೂಲಕ್ಷಾಂತರ ಮಂದಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದಾರೆ.
ಮಂಡಲ ಪೂಜೆಯ ವೇಳೆ ‘ಥಂಕಾ ಅಂಕಿ’ ಪೆಟ್ಟಿಗೆಯಲ್ಲಿ ಎಂಬ ಚಿನ್ನದ ಅಭರಣಗಳಿಂದ ಅಯ್ಯಪ್ಪ ಸ್ವಾಮಿಯನ್ನು ಅಲಂಕಾರ ಮಾಡಲಾಯಿತು.
ನವೆಂಬರ್ 16ಕ್ಕೆ ತೆರೆದಿದ್ದ ದೇವಾಲಯ ಭಾನುವಾರ 9 ಗಂಟೆಗೆ ಮುಚ್ಚಲಿದೆ. ಜನವರಿ 14ರಂದು ಸಂಕ್ರಾಂತಿ ಹಬ್ಬ ನಡೆಯುವ ಹಿನ್ನೆಲೆಯಲ್ಲಿ ಡಿಸೆಂಬರ್ 30ರಂದು ಪುನಾರಂಭವಾಗಲಿದೆ.