ವಿಜಯಪುರ: ಮೂರು ಸಲ ಅಧಿಕಾರದಲ್ಲಿರುವ ಸದ್ಯದ ಸಂಸದರಿಂದ ಕೊಲ್ಹಾರ ಪಟ್ಟಣಕ್ಕೆ ಯಾವುದೇ ಉಪಯೋಗವಾಗಿಲ್ಲ ಎಂದು ಜಿಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ಸದ್ಯದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಉತ್ತಮ ಸಂಘಟಕರು. ಅಭಿವೃದ್ಧಿ ಪರ ಚಿಂತಕರಾಗಿರುವುದರಿಂದ ಇವರನ್ನು ಗೆಲ್ಲಿಸುವುದು ನಮಗೆಲ್ಲ ಅನಿವಾರ್ಯವಾಗಿದೆ. ಜಿಲ್ಲೆ ಮತ್ತು ನಮ್ಮ ಪಟ್ಟಣದ ಪ್ರಗತಿಗೆ ಆಲಗೂರರು ಶ್ರಮಿಸಲಿದ್ದಾರೆ. ಸಾಮಾನ್ಯ ಜನರೂ ಜಿಗಜಿಣಗಿಯವರಿಂದ ಜುಗುಪ್ಸೆ ಹೊಂದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲ್ಲು ದೇಸಾಯಿ, ಅಧ್ಯಕ್ಷರಾದ ಮುಸ್ಕಾನ್ ಶಿರಬೂರ, ರಫೀಕ್ ಪಕಾಲಿ, ಮುಖಂಡರಾದ ಬಿಎಸ್. ಪತಂಗಿ, ಕಮಲವ್ವ ಮಾಕಾಳಿ, ಗಂಗಾಧರ ಸಂಬಣ್ಣಿ, ಉಸ್ಮಾನ್ ಪಟೇಲ, ದಸ್ತೀಗರಸಾಬ್ ಸೇರಿದಂತೆ ನೂರಾರು ಸ್ಥಳೀಯರು, ಪ್ರಮುಖರು ಭಾಗವಹಿಸಿದ್ದರು.