ಗುಜರಾತ್: ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರವೂ ಕಾಂಗ್ರೆಸ್ ದ್ವೇಷದ ಹಾದಿಯನ್ನೇ ತುಳಿಯುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮೆಹ್ಸಾನಾ ಜಿಲ್ಲೆಯ ತರಭ್ನಲ್ಲಿ ವಾಲಿನಾಥ್ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ದೇವಸ್ಥಾನದ ನಿರ್ಮಾಣದ ಜೊತೆಗೆ ಬಡವರಿಗಾಗಿ ಲಕ್ಷಗಟ್ಟಲೆ ಮನೆಗಳು ನಿರ್ಮಾಣವಾಗುತ್ತಿವೆ. ಈ ಮೂಲಕ ದೇವರ ಕೆಲಸ ಹಾಗು ದೇಶದ ಕೆಲಸ ಭರದಿಂದ ಸಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದ ಮೋದಿ, ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ ನಾಯಕರು ಮಂದಿರ ನಿರ್ಮಾಣಕ್ಕೂ ಅಡಚಣೆ ಉಂಟುಮಾಡಿದರು. ಇಂದು ಇಡೀ ದೇಶವೇ ಸಂತೋಷಿಸುತ್ತಿದ್ದರೂ ಕಾಂಗ್ರೆಸ್ ಮಾತ್ರ ತನ್ನ ದ್ವೇಷದ ಹಾದಿ ಬಿಡುತ್ತಿಲ್ಲ ಎಂದರು.