ನಾಗ್ಪುರ: ಭಾರತವು ಹಿಂದೂ ರಾಷ್ಟ್ರವಾಗಿದ್ದು, ದೇಶದ ಬಹುಸಂಖ್ಯೆಯ ಜನರು ಈ ನಂಬಿಕೆಯನ್ನು ದೃಢವಾಗಿ ನಂಬುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದ್ದಾರೆ.
ಆರ್ಎಸ್ಎಸ್ನ ಮರಾಠಿ ದಿನಪತ್ರಿಕೆ ತರುಣ್ ಭಾರತವನ್ನು ಪ್ರಕಟಿಸುವ ಶ್ರೀ ನರಕೇಸರಿ ಪ್ರಕಾಶನ ಲಿಮಿಟೆಡ್ನ ನಾಗ್ಪುರದ ಹೊಸ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದು ರಾಷ್ಟ್ರವೆಂಬ ಸತ್ಯವನ್ನು ಕೆಲ ಜನರು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ವಾಸ್ತವವೆಂದರೇ ಭಾರತ ಹಿಂದು ರಾಷ್ಟ್ರವಾಗಿದ್ದು, ಬಹುಸಂಖ್ಯೆಯ ಜನರು ಅದನ್ನು ಒಪ್ಪಿಕೊಂಡಿದ್ದಾರೆ. ಆದರೆ ಒಂದು ವರ್ಗದ ಜನರು ತಮ್ಮ ಸ್ವಾರ್ಥಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಒಪ್ಪಿಕೊಳ್ಳದಿರಬಹುದು. ಆದರೆ ಇದು ಹಿಂದೂ ಸಂಸ್ಕೃತಿಯನ್ನು ಹೊಂದಿರುವ ಹಿಂದೂ ಭೂಮಿ ಎಂಬುದು ನಿತ್ಯಸತ್ಯ ಎಂದರು.
ಹಿಂದೂಸ್ಥಾನ (ಭಾರತ), ಒಂದು ಹಿಂದೂ ರಾಷ್ಟ್ರ. ಇದು ಸತ್ಯ. ಸೈದ್ಧಾಂತಿಕವಾಗಿ ಎಲ್ಲಾ ಭಾರತೀಯರು (ಭಾರತೀಯರು) ಹಿಂದೂಗಳಾಗಿದ್ದಾರೆ. ಹಿಂದೂಗಳು ಎಂದರೆ ಎಲ್ಲಾ ಭಾರತೀಯರು. ಇಂದು ಭಾರತ (ಭಾರತ)ದಲ್ಲಿರುವವರೆಲ್ಲರೂ ಹಿಂದೂ ಸಂಸ್ಕೃತಿ ಹಿನ್ನಲೆಯನ್ನು ಹೊಂದಿರರುವವರೇ. ಈಗ ಬೇರೆ ಮತಾಚರಣೆ ಮಾಡುತ್ತಿರುವವರೆಲ್ಲರೂ ಈ ಹಿಂದೆ ಹಿಂದೂಗಳೇ ಆಗಿದ್ದರು ಎಂದು ಸ್ಪಷ್ಟನೆ ನೀಡಿದರು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಗಡ್ಕರಿ ಇದ್ದರು.