News Karnataka Kannada
Sunday, May 12 2024
ಮಂಗಳೂರು

“ವೃಕ್ಷಬಂಧನ – ಶಕ್ತಿ ವಿದ್ಯಾಸಂಸ್ಥೆಯಲ್ಲಿ ವಿಶಿಷ್ಟ ಆಚರಣೆ”

"Vrikshabandhan - A unique ritual in Shakti Vidyasansthan"
Photo Credit : News Kannada

ಮಂಗಳೂರು: ಶಕ್ತಿನಗರದ ಶಕ್ತಿ ವಸತಿಶಾಲೆಯಇಕೋ-ಕ್ಲಬ್ ವತಿಯಿಂದ ವಿಶೇಷವಾಗಿ ‘ವೃಕ್ಷಬಂಧನ’ ಆಚರಿಸಲಾಯಿತು. ಮರಗಳಿಂದ ಉದುರಿದ ಎಲೆಗಳು ಹಾಗೂ ಹೂವುಗಳನ್ನು ಬಳಸಿ ನೈಸರ್ಗಿಕ ರಾಖಿ ನಿರ್ಮಾಣ ಮಾಡಿ ಮರಗಳಿಗೆ ಕಟ್ಟುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು.

ಇದೇ ಸಂದರ್ಭದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ಮಾತನಾಡಿ ನಮ್ಮ ಮನೆಯ ಸುತ್ತಮುತ್ತಲೂ ಗಿಡ ನೆಟ್ಟು ಬೆಳೆಸಬೇಕು, ಇದರಿಂದ ಪ್ರಪಂಚದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಮ್ಮ ನಡುವೆಯೇ ಅನೇಕ ಮಹನೀಯರು ಪರಿಸರಕ್ಕಾಗಿ ಜೀವನವನ್ನೇ ಸಮರ್ಪಿಸಿದವರಿದ್ದಾರೆ. ಅವರತ್ಯಾಗ ಮತ್ತು ಸಂಕಲ್ಪ ಎಲ್ಲರಿಗೂ ಅನುಸರಣಿಯ ಎಂದರು. ಶಾಲೆಯ ಸಮೀಪದಲ್ಲಿಔಷಧೀಯ ಸಸ್ಯವನದ ನಿರ್ಮಾಣ ಹಾಗೂ ಜೈವಿಕಗೊಬ್ಬರದ ಘಟಕವನ್ನು ಸ್ಥಾಪಿಸಲು ನಿಶ್ಚಯಿಸಲಾಯಿತು. ವಿದ್ಯಾರ್ಥಿಗಳು ಪರಿಸರ ರಕ್ಷಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ, ಉಪಪ್ರಾಂಶುಪಾಲ ದೀಪಕ್‌ಕುಡ್ವ, ಇಕೋ- ಕ್ಲಬ್‌ನ ನಿರ್ದೇಶಕ ಶಿಕ್ಷಕರಾದ ಅಪೂರ್ವಾ, ಪಂಚಮಿ, ಆಶಾ ಹಾಗೂ ಮಧುರಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು