ರಾಯ್ಪುರ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ನಡೆಯಲಿದ್ದು, ಆ ದಿನವನ್ನು ʼಮದ್ಯ ಮಾರಾಟ ನಿಷೇಧʼ ದಿನ ಎಂದು ಘೋಷಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಛತ್ತೀಸ್ಗಢ ಸಿಎಂ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.
ಡಿ.25 ರಿಂದ ಜ.2 ರವರೆಗೆ ನಾವು ‘ಉತ್ತಮ ಆಡಳಿತ’ ದಿನವನ್ನು ಆಚರಿಸುತ್ತಿದ್ದೇವೆ. ರಾಮರಾಜ್ಯ ಉತ್ತಮ ಆಡಳಿತದ ಮಾದರಿಯಾಗಿದೆ. ಛತ್ತೀಸ್ಗಢ ರಾಜ್ಯವು ಭಗವಾನ್ ರಾಮನ ‘ನಾನಿಹಾಲ್’ (ಭಗವಾನ್ ರಾಮನ ತಾಯಿಯ ಜನ್ಮಸ್ಥಳ) ಆಗಿರುವುದು ನಮ್ಮ ಅದೃಷ್ಟ ಮತ್ತು ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠೆ’ ಜ.22 ರಂದು ನಡೆಯುವುದು ಸಹ ನಮಗೆ ಅದೃಷ್ಟ” ದಿನವಾಗಿದೆ ಎಂದರು. ಛತ್ತೀಸ್ಗಢದಾದ್ಯಂತ ಸಂತಸವಿದೆ.
ಸಮಾರಂಭಕ್ಕಾಗಿ ರಾಜ್ಯದ ಅಕ್ಕಿ ಗಿರಣಿಗಾರರ ಸಂಘವು 300 ಮೆಟ್ರಿಕ್ ಟನ್ ಸುಗಂಧಭರಿತ ಅಕ್ಕಿಯನ್ನು ಅಯೋಧ್ಯೆಗೆ ಕಳುಹಿಸಿದೆ. ರಾಜ್ಯದ ಸಾಗುವಳಿದಾರರು ಉತ್ತರ ಪ್ರದೇಶದ ನಗರಕ್ಕೆ ತರಕಾರಿಗಳನ್ನು ರವಾನಿಸಲಿದ್ದಾರೆ ಎಂದು ಸಿಎಂ ಹೇಳಿದರು.