ಮುಂಬೈ: ರಿಸರ್ವ್ ಬ್ಯಾಂಕನ್ನೇ ಬ್ಲಾಷ್ಟ್ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ. ಮುಂಬಯಿ ನಗರದ 11 ಜಾಗಗಳಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಗೆ ಮೇಲ್ ಕಳುಹಿಸಲಾಗಿದ್ದು, ಎಲ್ಲಡೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
ಮಂಗಳವಾರ ರಾತ್ರಿ (ಡಿ.26) ರಾತ್ರಿ 7ಗಂಟೆ ಸುಮಾರಿಗೆ ಬೆದರಿಕೆ ಮೇಲ್ ಕಳೂಹಿಸಲಾಗಿದ್ದು, ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಆರ್ಬಿಐಗೆ ಬೆದರಿಕೆ ಮೇಲ್ನಲ್ಲಿ ಸಂದೇಶ ಬರೆಯಲಾಗಿದೆ.
ಆರ್ಬಿಐ ಕಚೇರಿ, ಮುಂಬಯಿ ನಗರದ ಇತರೆ 11 ಸ್ಥಳಗಳಲ್ಲಿರುವ ಐಸಿಐಸಿಐ ಬ್ಯಾಂಕ್, ಹೆಚ್ಡಿಎಫ್ಸಿ ಬ್ಯಾಂಕ್ಗಳಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಮೇಲ್ ಕಳಿಹಿಸಲಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಮುಂಬೈ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳ ಪರಿಶೀಲನೆ ನಡೆದಿ ಕೇಸ್ ದಾಖಲಿಸಿದ್ದಾರೆ.
ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಇದೊಂದು ಹುಸಿ ಬೆದರಿಗೆ ಮೇಲ್ ಎಂದು ಸ್ಪಷ್ಟಪಡಿಸಿದ್ದಾರೆ.