ಪಾಟ್ನಾ: ಮಹಿಳೆಯೊಬ್ಬರು ಮನುಸ್ಮೃತಿಯ ಪ್ರತಿಯನ್ನು ಸುಟ್ಟುಹಾಕಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್ಜೆಡಿ ಸದಸ್ಯೆ ಎನ್ನಲಾದ ಮಹಿಳೆಯೊಬ್ಬರು ಪುಸ್ತಕವನ್ನು ಸುಟ್ಟು ಹಾಕಿದ್ದಾರೆ.
ಆದರೆ, ಈ ಬಗ್ಗೆ ಆಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಹಿಳೆ ಕೋಳಿ ಬೇಯಿಸುವಾಗ ಮನುಸ್ಮೃತಿಯ ಪ್ರತಿಯನ್ನು ತೆಗೆದುಕೊಂಡು ಒಲೆಯೊಳಗೆ ಇಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿದೆ. ನಂತರ ಆಕೆ ಪುಸ್ತಕದ ಸುಡುವ ಪ್ರತಿಯೊಂದಿಗೆ ಸಿಗರೇಟನ್ನು ಹಚ್ಚುವ ದೃಶ್ಯವಿದೆ.
ಘಟನೆಯ ನಂತರ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ರೀತಿಯ ಘಟನೆಗಳು ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಹೇಳಿದ್ದಾರೆ. ಕೆಲವು ಬಳಕೆದಾರರು ಮನುಸ್ಮೃತಿ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಹರಡುತ್ತದೆ ಎಂದು ಹೇಳಿದರು.
ಈ ಹಿಂದೆ ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್ ಅವರು ರಾಮಚರಿತಮಾನಸ ವಿರುದ್ಧ ಹೇಳಿಕೆ ನೀಡಿದ್ದು ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.