ಪಾಟ್ನಾ: ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಸೋಮವಾರ ‘ಸಾವನ್’ ನ ಮೊದಲ ದಿನದಂದು ಪೂಜೆಗಾಗಿ ನೀರು ತರಲು ಗಂಗಾ ನದಿಗೆ ಹೋಗಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ, ಖೈರಿಯಾ ಗ್ರಾಮದ ಆರು ಯುವಕರು ‘ಸಾವನ್’ ನ ಮೊದಲ ಸೋಮವಾರ ಶಿವಲಿಂಗದ ಮೇಲೆ ಅರ್ಪಣೆ ಮಾಡಲು ಗಂಗಾಜಲವನ್ನು ತರಲು ಖಧಾ ಗೋಲಾ ಘಾಟ್ ಗೆ ಹೋಗಿದ್ದರು, ಅದರ ಆಳವನ್ನು ಅರಿತುಕೊಳ್ಳದೆ ನೀರಿಗೆ ಇಳಿದು ಮುಳುಗಲು ಪ್ರಾರಂಭಿಸಿದರು. ಘಾಟ್ ನಲ್ಲಿದ್ದ ಇತರರು ಅವರು ಮುಳುಗುತ್ತಿರುವುದನ್ನು ನೋಡಿ ಕೆಲವರು ನದಿಗೆ ಹಾರಿ ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಘಟನೆಯ ಬಗ್ಗೆ ತಿಳಿದ ಗ್ರಾಮಸ್ಥರು ಘಾಟ್ ಗೆ ಧಾವಿಸಿ, ಪೊಲೀಸರಿಗೆ ಕರೆ ಮಾಡಿ ಶವಗಳನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ.