ಜೈಪುರ: ಕೋಚಿಂಗ್ ಸೆಂಟರ್ ನಿಂದ ಹಿಂದಿರುಗುತ್ತಿದ್ದ 16 ವರ್ಷದ ಬಾಲಕನೊಬ್ಬ ಕೊಳದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಸಿಕರ್ ನಲ್ಲಿ ನಡೆದಿದೆ.
ಜುಂಜುನು ನಿವಾಸಿ ಯುವರಾಜ್ ಮೀನಾ ಸಿಕರ್ನಲ್ಲಿ ಜೆಇಇ ಕೋಚಿಂಗ್ ಪಡೆಯುತ್ತಿದ್ದರು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೋಚಿಂಗ್ ಮುಗಿಸಿಕೊಂಡು ವಾಪಸಾಗುತ್ತಿದ್ದಾಗ ನವಲ್ಘರ್ ರಸ್ತೆಯಲ್ಲಿ ನೀರು ತುಂಬಿದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸಿಕಾರ್ ಸಿವಿಲ್ ಡಿಫೆನ್ಸ್ ತಂಡವು ಸ್ಥಳಕ್ಕೆ ತಲುಪಿದ್ದು ಸುಮಾರು 30 ನಿಮಿಷಗಳ ಪ್ರಯತ್ನದ ನಂತರ ಶವವನ್ನು ಹೊರತೆಗೆಯಲಾಗಿದೆ.
ಮೃತ ಯುವರಾಜ್ ಗೆ ಇಬ್ಬರು ಸಹೋದರಿಯರಿದ್ದಾರೆ. ಮೂವರು ಒಡಹುಟ್ಟಿದವರು ಪ್ರಸ್ತುತ ಸಿಕಾರ್ ನಲ್ಲಿ ವಾಸಿಸುತ್ತಿದ್ದರು. ಯುವರಾಜ್ ತಂದೆ ಸಿಐಎಸ್ಎಫ್ನಲ್ಲಿ ಕಾನ್ಸ್ಟೇಬಲ್ ಆಗಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ ಮಾತನಾಡಿ, ‘ಕಾಂಗ್ರೆಸ್ ನಾಯಕರ ನಡುವಿನ ಒಳಜಗಳದಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಈ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.