News Karnataka Kannada
Saturday, May 18 2024
ಆಂಧ್ರಪ್ರದೇಶ

ತಿಮ್ಮಪ್ಪನ ಸನ್ನಿಧಿಯಲ್ಲಿ ಮಿತಿಮೀರಿದ ಭಕ್ತಗಣ!

Those who climb Tirumala hill should now carry a stick: Do you know why?
Photo Credit :

ತಿರುಪತಿ: ತಿರುಮಲ ಬೆಟ್ಟ ಭಕ್ತಾದಿಗಳಿಂದ ತುಂಬಿ ತುಳುಕುತ್ತಿದೆ. ಒಂದೆಡೆ ಮಕ್ಕಳಿಗೆ ಬೇಸಿಗೆ ರಜೆ ಮತ್ತೊಂದೆಡೆ ವಾರದ ರಜೆಯಿಂದಾಗಿ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿನ ಎಲ್ಲಾ ವಿಭಾಗಗಳು ಭರ್ತಿಯಾಗಿದ್ದು, ಭಕ್ತರು ಹೊರಗೆ ಕಿಲೋಮೀಟರುಗಟ್ಟಲೆ ಸಾಲುಗಟ್ಟಿ ನಿಂತಿದ್ದಾರೆ.  ಶ್ರೀವಾರಿ ದರ್ಶನಕ್ಕೆ 48 ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರತಿ ಗಂಟೆಗೆ ಸುಮಾರು 8,000 ಭಕ್ತರು ಸರತಿ ಸಾಲಿನಲ್ಲಿ ಪ್ರವೇಶಿಸುತ್ತಾರೆ. ಗಂಟೆಗೆ 4 ಸಾವಿರ ಜನರಿಗೆ ಮಾತ್ರ ವೆಂಕಟೇಶ್ವರಸ್ವಾಮಿ ದರ್ಶನ ಭಾಗ್ಯ ಸಿಗಲಿದೆ ಆ ಸಂಖ್ಯೆ ಮೀರಿ ಭಕ್ತರಿಗೆ ದರ್ಶನ ನೀಡಲು ಸಾಧ್ಯವಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.ವೈಕುಂಠ ಏಕಾದಶಿಯಲ್ಲಿ  ಆಗಮಿಸುವ ಭಕ್ತರಿಗಿಂತ ಈ ಬಾರಿ ಹೆಚ್ಚಿನ ಭಕ್ತರು ತಿರುಮಲಕ್ಕೆ ಬರುತ್ತಿದ್ದಾರೆ.

ಭಕ್ತರ ಸಂಖ್ಯೆ ಒಮ್ಮೆಲೇ ಹೆಚ್ಚಾದ ಕಾರಣ ಟಿಟಿಡಿ ದಿಕ್ಕು ತೋಚದಂತಾಗಿದೆ ಅಷ್ಟು ಜನ ಭಕ್ತರನ್ನು ಸಂಭಾಳಿಸಲು ಕಷ್ಟವಾದ ಕಾರಣ ಮೂರು ದಿನಗಳ ಕಾಲ ವಿಐಪಿ ಬ್ರೇಕ್ ದರ್ಶನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಇನ್ನೂ ನಾಲ್ಕು ದಿನ ಜನದಟ್ಟಣೆ ಇರಲಿದೆ ಎಂದು ಟಿಟಿಡಿ ಇಒ ಧರ್ಮರೆಡ್ಡಿ ಹೇಳಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ.

ಮತ್ತೊಂದೆಡೆ, ಸರತಿ ಸಾಲಿನಲ್ಲಿ ನಿಂತ ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಟೋಕನ್‌ ತೆಗೆದುಕೊಳ್ಳಲು ಉಂಟಾದ ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ಟಿಟಿಡಿ ಕ್ರಮ ಕೈಗೊಳ್ಳುತ್ತಿದೆ. ಈ ಬಗ್ಗೆ  ಪರಿಶೀಲಿಸಿದ ಟಿಟಿಡಿ ಇಒ ಧರ್ಮರೆಡ್ಡಿ, ವೈಕುಂಠಂ ಸಂಕೀರ್ಣದ ಹೊರಗಿರುವವರ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು